ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಾನುವಾರ ಪ್ರಿಮಿಯಂ ಸನ್ ಫ್ಲವರ್ ಪ್ರಾಯೋಜಕತ್ವದಲ್ಲಿ ನಮ್ಮ ಟೀವಿಯಲ್ಲಿ ಪ್ರಸಾರವಾಗುವ `ನಮ್ಮೂರ ಹಬ್ಬ’ ತುಳು ಹಾಸ್ಯಮಯ ಕಾರ್ಯಕ್ರಮವನ್ನು ಪೊಳಲಿ ದೇವಸ್ಥಾನದ ಅರ್ಚಕ ನಾರಾಯಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ ತಂಡದ ಕಲಾವಿದರು ಮತ್ತು ಕಂಪೆನಿ ಪ್ರತಿನಿಧಿಗಳೊಂದಿಗೆ ವೆಂಕಟೇಶ್ ನಾವಡ, ತಾಪಂ ಸದಸ್ಯ ಯಶವಂತ, ಬಾಲಕೃಷ್ಣ ಪೊಳಲಿ, ಸೋಮಶೇಖರ್ ಮೊದಲಾದವರಿದ್ದರು. ಕಲಾವಿದ ದಿನೇಶ್ ಅತ್ತಾವರ ಕಾರ್ಯಕ್ರಮ ನಿರೂಪಿಸಿದರು.
