ಬೆಳ್ಮಣ್ (ಉಡುಪಿ): ಮಳೆ ಅಭಾವದಿಂದ ಜಿಲ್ಲೆಯಲ್ಲಿ ಕೆರೆ ಬಾವಿ ನದಿಗಳು ಬರಿದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ನೀರಿನ ಹಾಹಾಕಾರ ಎಲ್ಲಡೆಯಾದರೆ ಇಲ್ಲೊಬ್ಬರು ಶ್ರಮಜೀವಿ ನೀರಿಗಾಗಿ ಸಾಹಸವನ್ನೆ ಮೆರೆದಿದ್ದಾರೆ.ಸಾವಿರಗಟ್ಟಲೆ ಅಡಿಗಳಷ್ಟು ಬೋರ್ವೆಲ್ ಕೊರೆದರೂ ನೀರು ಸಿಗದ ಈ ಬರಗಾಲದಲ್ಲಿ ಸಚ್ಚೇರಿಪೇಟೆಯ ಭುವನೇಶ ಗೌಡ ತನ್ನ 5 ಸೆಂಟ್ಸ್ ಜಾಗದಲ್ಲಿ ಎಕಾಂಗಿಯಾಗಿ ಬಾವಿ ತೋಡಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯ 32ರ ಹರೆಯದ ಭುವನೇಶ ಗೌಡ ತನ್ನಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಚಾವಂಡಿಗುಡ್ಡೆ ಎಂಬಲ್ಲಿ ವಾಸಿಸುತ್ತಿದ್ದು ಹಲವಾರು ವರ್ಷಗಳಿಂದ ನೀರಿನ ತೊಂದರೆ ಅನುಭವಿಸಿದ್ದ. ಇತೀಚೆಗೆ ಭುವನೇಶ ತಾನೂ ಒಂದು ಸೈಟು ಖರೀದಿಸಿದ್ದ ಇದರಲ್ಲಿ ಹೊಸ ಮನೆ ಕಟ್ಟುತ್ತಿದ್ದು ಅದಕ್ಕೆ ಬೇಕಾದ ನೀರಿಗಾಗಿ ಬಾವಿ ತೋಡುವ ಸಾಹಸಕ್ಕೆ ಕೈ ಹಾಕಿದ್ದಾರೆ.ದಿನಂಪ್ರತಿ ಕೂಲಿ ಕೆಲಸ ಮಾಡಿ ಸುಸ್ತಾಗಿ ಮನೆ ಬಂದು ಸಾಕಪ್ಪ ಅಂತ ಮಲಗುವವರೆ ಜಾಸ್ತಿ. ಅಂತದರಲ್ಲಿ ಕೂಲಿ ಮಾಡಿ ಮನೆಗೆ ಬಂದರು ಗೌಡರು ಸಂಜೆಯಿಂದ ರಾತ್ರಿವರಗೆ ಬಾವಿ ತೋಡುವುದರಲ್ಲಿ ತಲ್ಲಿಣರಾಗುತ್ತಾರೆ. ಕತ್ತಲಾದರೂ ಅಗೆಯುವ ಕೆಲಸ ನಿಲ್ಲಿಸುತ್ತಿರಲ್ಲಿ ಕ್ಯಾಂಡಲ್ ಬೆಳಕಿನಲ್ಲಿ ತೋಡಿದ್ದು ಇದೆ ಅಂತಾರೆ ಗೌಡರು.ಒಂಟಿಯಾಗಿ ಅಗೆಯವುದಲ್ಲದೆ ಮೇಲಿಂದ ಮಣ್ಣು ಹೊತ್ತು ತರುತ್ತಾರೆ.
ಒಂದು ಬಾವಿ ತೊಡಬೇಕಾದರೆ ಮಣ್ಣು ಹೊರುವುದಕ್ಕೆ ಎಳೆಯುದಕ್ಕೆ 3-4 ಜನ ಬೇಕೆ ಬೇಕು. ಅದರೆ ಭುವನೇಶರು ಯಾರ ಸಹಾಯವಿಲ್ಲದೆ ಒಬ್ಬರೆ ಅಗೆದು ಮಣ್ಣು ತುಂಬಿಸಿ, ತಲೆಯ ಮೇಲೆ ಹೊರುತ್ತ ಏಣಿ ಹತ್ತಿಕ್ಕೊಂಡು, ಅದನ್ನು ಹೊರಗೆ ಹಾಕಬೇಕು ಅಂದರೆ ಸುಲಭದ ಮಾತಲ್ಲ. ಅವರ ಆದಮ್ಯ ಚೇತನವನ್ನು ಊಹಿಸಲು ಸಾಧ್ಯವಿಲ್ಲ.ಒಂಟಿಯಾಗಿ ಅಗೆಯವುದಲ್ಲದೆ ಮೇಲಿಂದ ಮಣ್ಣು ಹೊತ್ತು ತರುತ್ತಾರೆ.ಪ್ರತೀ ದಿನ ರಾತ್ರಿ ಸ್ವಲ್ಪ ಸ್ವಲ್ಪವೇ ಮಣ್ಣು ಅಗೆದು ಒಟ್ಟು 16 ದಿನಗಳಲ್ಲಿ. 18 ಅಡಿ ಬಾವಿ ತೋಡಿ ಇದೀಗ ಎರಡು ಅಡಿ ನೀರು ಪಡೆದು ಯಶಸ್ವಿಯಾಗಿ ಇದೀಗ ಸುದ್ದಿಯಾಗಿದ್ದಾರೆ.ಈ ಹಿಂದೆ ಶಾಲಾ ರಜಾ ದಿನಗಳಲ್ಲಿ ಬಾವಿ ತೋಡುವ ಕೆಲಸಕ್ಕೆ ಹೋಗುತಿದ್ದರಿಂದ ಅನುಭವವೇ ಇಲ್ಲಿ ಸಹಕಾರಿಯಾಯಿತು ಎನ್ನುವ ಭುವನೇಶ ಇದೀಗ ನಮ್ಮ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ ಎನ್ನುತ್ತಾರೆ. ಒಟ್ಟಾರೆಯಾಗಿ ಶ್ರಮಕ್ಕೆ ತಕ್ಕ ಫಲ ಭುವನೇಶರಿಗೆ ದೊರಕಿದೆ. ಈತನನ್ನು ಆಧುನಿಕ ಭಗೀರಥ ಎನ್ನೋಣವೇನೋ..?

