ಪೊಳಲಿ ಶ್ರೀದುರ್ಗಾಪರಮೇಶ್ವರಿ ದೇವಿಗೆ ವಜ್ರಖಚಿತ ರಜತ ಕವಚವನ್ನು ಸಮರ್ಪಿಸಲಾಯಿತು. ಮಾಜಿ ಸಚಿವ ನಾಗರಾಜ್ ಶೆಟ್ಟಿ ನೇತೃತ್ವದ ತಂಡ ಇದನ್ನು ದೇವರಿಗೆ ಸಮರ್ಪಿಸಿದೆ. ವಜ್ರದ ಮೂಗುತಿ, ಬಂಗಾರ ತಾಳಿ ಒಳಗೊಂಡ ಬೆಳ್ಳಿಯ ಮೂತಿ, ಬೆಳ್ಳಿಯ ಪ್ರಭಾವಳಿ ಒಳಗೊಂಡಿದೆ. ಕಾವೂರು ಮಹಲಿಂಗೇಶ್ವರ ದೇವಸ್ಥಾನದಿಂದ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಯ ಮೂಲಕ ಸಮರ್ಪಿಸಲಾಯಿತು.


