ಬಂಟ್ವಾಳ: ಲೋಕಸಭಾ ಚುನಾವಣೆ ಯ ಮತದಾರರ ಬಂಟ್ವಾಳ ಜಾಗ್ರತಿ ಸಮಿತಿ/ ವೇದಿಕೆಯ ಉದ್ಘಾಟನೆ ಬಿಸಿರೋಡಿನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು.ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಸುಧಾಕರ , ಅವರು ಕಾರ್ಯಕ್ರಮ ಉದ್ಘಾಟಿಸಿ ಮಾಹಿತಿ ನೀಡಿದರು. ಹದಿನೆಂಟು ವರ್ಷವಾದ ಪ್ರತಿಯೊಬ್ಬರನ್ನು ಮತದಾರ ಪಟ್ಟಿಯಲ್ಲಿ ಸೇರಿಸುವುದು , ಮತ್ತು ಸೇರಿದೆಯಾ ಎಂದು ಖಾತ್ರಿ ಪಡಿಸಲು ಈ ಕಾರ್ಯಕ್ರಮ ಪ್ರಥಮ ಅಧ್ಯತೆ.ಪ್ರತಿಯೊಬ್ಬ ಅಧಿಕಾರಿಗಳು ಕನಿಷ್ಟ ಹತ್ತು ಜನರನ್ನು ಚುನಾವಣೆ ಗೆ ಸಂಬಂಧಿಸಿದ ಅನ್ ಲೈನ್ ಪರೀಕ್ಷಿಸಲು ಪ್ರೇರಣೆಯಾಗಬೇಕು ಎಂದು ಅವರು ತಿಳಿಸಿದರು.

WhatsApp Image 2019-02-21 at 4.14.30 PM ‌ಇವಿಎಂ.ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿ ಸರಿಯಾಗಿ ತಿಳಿದುಕೊಂಡು ಸಾರ್ವಜನಿಕ ರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ.ಎಲ್ಲಾ ಸಂಘಟನೆಗಳನ್ನು ಸೇರಿಸಿಕೊಂಡು ಪ್ರತಿಯೊಬ್ಬ ಹದಿನೆಂಟು ವರ್ಷ ಪ್ರಾಯದವರನ್ನು ಮತದಾನ ಪಟ್ಟಿಗೆ ಸೇರ್ಪಡೆಗೆ ಹಾಗೂ ಮತದಾನ ಮಾಡುವಂತೆ ಜಾಗ್ರತಿ ಮಾಡುವಂತೆ ಅವರು ತಿಳಿಸಿದರು.ಚುನಾವಣಾ ಕ್ಲಬ್ ನಿರ್ಮಾಣ ಮಾಡಿ ಅಮೂಲಕ ಪ್ರತಿ ವಿಷಯಗಳು ಇಲಾಖೆ ಗೆ ತಲುಪಬೇಕು.ಪ್ರತಿಯೋಬ್ಬ ಪ್ರಜೆಯೂ ಮತದಾನ ಪಟ್ಟಿಗೆ ಸೇರ್ಪಡೆಗೆ ಹಾಗೂಬ ಮತದಾನ ಮಾಡುವ ಉದ್ದೇಶದಿಂದ ಜನರ ಮನ ಪರಿವರ್ತನೆ ಗಾಗಿ ಮತದಾರರ ಪ್ರತಿಜ್ಞೆ ಕಾರ್ಯಕ್ರಮ ವನ್ನು ನಡೆಸಲು ಸೂಚಿಸಿದರು.

WhatsApp Image 2019-02-21 at 4.14.32 PMಪ್ರತಿದಿನ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ರನ್ನು ಮತದಾನದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ಕಾರ್ಯಕ್ರಮ ಗಳ ಮೂಲಕ ಜಾಗ್ರತಿ ಮಾಡುವ ಪ್ರತಿಜ್ಞೆ ಮಾಡಲು ತಾಲೂಕಿನ ಅಧಿಕಾರಿಗಳಿಗೆ ತಿಳಿಸಿದರು. ಸಾಮಾಜಿಕ ಜಾಲತಾಣಗಳನ್ನು ಬಳಸಿ ಅಮೂಲಕವೂ ಎಚ್ಚರಿಸುವ ಕೆಲಸ ಮಾಡಿ‌ ಎಂದರು.ಕಾರ್ಯಕ್ರಮ ದಲ್ಲಿ ಪ್ರತಿಜ್ಞಾ ಸ್ವೀಕಾರ ನಡೆಯಿತು. ‌ತಾಲೂಕು ಪಂಚಾಯತ್ ಕಾರ್ಯ ನಿರ್ವಣಾಧಿಕಾರಿ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆಡೆಯಿತು.ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು‌ ಕಾರ್ಯಾಗಾರ ದಲ್ಲಿ ಭಾಗವಹಿಸಿದ್ದರು

By suddi9

Leave a Reply

Your email address will not be published. Required fields are marked *