ವಿಟ್ಲ: ಶ್ರೀ ನರೇಂದ್ರ ಮೋದಿಜಿಯವರ ಐದು ವರ್ಷಗಳ ಅಭಿವೃದ್ಧಿಯ ಪರಿಚಯದೊಂದಿಗೆ `ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಪ್ರಧಾನ ಸೇವಕ ರಥ ಯಾತ್ರೆಯು ವಿಟ್ಲಕ್ಕೆ ಆಗಮಿಸಿ ಪ್ರಚಾರ ನಡೆಸಿತು.

ಈ ಸಂದರ್ಭದಲ್ಲಿ ಬಿಜೆಪಿ ವಿಟ್ಲ ನಗರ ಅಧ್ಯಕ್ಷ ಮೋಹನದಾಸ ಉಕ್ಕುಡ, ಕಾರ್ಯದರ್ಶಿ ಉದಯ ಆಲಂಗಾರು, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ವಿಟ್ಲ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯರುಗಳಾದ ರಾಮದಾಸ ಶೆಣೈ, ಉಷಾ ಕೆ, ಲೋಕನಾಥ ಶೆಟ್ಟಿ, ಶ್ರೀಕೃಷ್ಣ, ಮಂಜುನಾಥ ಕಲ್ಲಕಟ್ಟ, ಸಂದ್ಯಾ ಮೋಹನ ಸೇರಾಜೆ ಹಾಗೂ ಇತರರು ಉಪಸ್ಥಿತರಿದ್ದರು.
