ಉಡುಪಿ: ಫೆಬ್ರವರಿ 3 ರಂದು ಬ್ರಹ್ಮವಾರ ದಲ್ಲಿ ಜರಗಲಿರುವ ವಿಶ್ವ ಬಿಲ್ಲವ ಮಹಾಸಮಾವೇಶ ದ ಚಪ್ಪರ ಮಹೂರ್ತ ಮಾಡಿದ ನಮ್ಮ ಸಮಾಜದ ತಾಯಿ ಹೃದಯದ ರಾಜಕಾರಣಿಗಳಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಡಾ. ರಾಜಶೇಖರ್ ಕೋಟ್ಯಾನ್. ಬಿಲ್ಲವ ಸಮಾವೇಶದ ಯಶಸ್ವಿಗಾಗಿ ಹಗಲು ಇರುಳು ಶ್ರಮಿಸುತ್ತಿರುವ ಸಮಾವೇಶದ ಅಧ್ಯಕ್ಷರಾದ ಬಿ ಎನ್ ಶಂಕರ್ ಪೂಜಾರಿ ಪ್ರಧಾನ ಸಂಚಾಲಕರಾದ ಅಚ್ಚುತ ಅಮೀನ್ ಕಲ್ಮಾಡಿ ಕಾರ್ಯಾಧ್ಯಕ್ಷರಾದ ಪ್ರವೀಣ್, ಎಂ ಪೂಜಾರಿ, ಸತ್ಯಜಿತ್ ಸುರತ್ಕಲ್ ಮತ್ತಿತರರು ಉಪಸ್ಥಿತರಿರುವರು.

