ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಧ್ವಜಸ್ಥಂಭದ ಕೊಳವೆಕಲ್ಲು, ಪೀಠ ಕಾರ್ಕಳದಿಂದ ಹೊರಟು ಮಧ್ಯಾಹ್ನ 2.30ಕ್ಕೆ ಗಂಜಿಮಠ ಶ್ರೀ ಗಣಪತಿ ದೇವಸ್ಥಾನದ ಅರ್ಚಕ ಗಣೇಶ್ ಭಟ್ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ವಾಹನಗಳ ಮೂಲಕ ಧ್ವಜಪೀಠದ ಮೆರವಣಿಗೆ ಮುಂದುವರಿದು.ಅಪರಾಹ್ನ 3.15ಕ್ಕೆ ಕೈಕಂಬ ಗಣೇಶ್ ಕಟ್ಟೆಯ ಬಳಿ ಭಗವ್ದಭಕ್ತರಿಗೆ ಧ್ವಜಪೀಠದ ದರ್ಶನದ ಬಳಿಕ 4 ಗಂಟೆಗೆ ಶ್ರೀ ಕ್ಷೇತ್ರ ಪೊಳಲಿaಗೆ ಆಗಮಿಸಿತು.
ಮೆರವಣಿಯಲ್ಲಿ ಧಾರ್ಮಿಕ ದತ್ತಿ ಪರಿಷತ್ನ ಸದಸ್ಯ ಪದ್ಮನಾಭ ಕೋಟ್ಯಾನ್ ಮತ್ತು ಯಾದವ ಕೋಟ್ಯಾನ್ ಪೆರ್ಮುದೆ,ಕೃಷ್ಣ ಅಮೀನ್, ನೂತನ ಧ್ವಜಸ್ಥಂಭ ನಿರ್ಮಾಣ ಸಮಿತಿ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಗೌರವ ಅಧ್ಯಕ್ಷ ರಾಮ್ದಾಸ್ ಕೋಟ್ಯಾನ್ ಮಜಿಲಗುತ್ತು, ಪ್ರಧಾನ ಕಾರ್ಯದರ್ಶಿ ಪುರುಷ ಎನ್. ಸಾಲ್ಯಾನ್ ನೆತ್ರಕೆರೆ, ಕೋಶಧಿಕಾರಿ ಬಳ್ಳಿ ಚಂದ್ರಶೇಖರ ಕೈಕಂಬ, ಉಪಾಧ್ಯಕ್ಷರುಗಳಾದ ಗೋಪಾಲಕೃಷ್ಣ ಕೈಕಂಬ, ಉಮೇಶ ಪೂಜಾರಿ ಬಾರಿಂಜ, ಜಯಾನಂದ ಅಂಚನ್ ಪಲ್ಲಿಪಾಡಿ, ಜೊತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಅಮ್ಮುಂಜೆ, ರಾಜು ಕೋಟ್ಯಾನ್ ಪಲ್ಲಿಪಾಡಿ, ಜೊಶೆ ಕೋಶಾಧಿಕಾರಿ ಯಶವಂತ ಕೋಟ್ಯಾನ್ ಪೊಳಲಿ, ಚಂದಪ್ಪ ಅಂಚನ್ ಮಜಿಲಗುತ್ತು, ಸದಾಶಿವ ಕರ್ಕೇರಾ ಕಾಜಿಲ, ಡಾ.ಸತೀಶ್ನುಗ್ಗೆಮಾರ್ ಪ್ರಶಾಂತ್ ವಿಮಲಕೋಡಿ, ಮೋಹನ್ ಸಾಲ್ಯಾನ್, ಕರುಣಾಕರ, ಗಣೇಶ್ ಪೂಜಾರಿ, ರಾಮಪ್ಪ ಪೂಜಾರಿ, ನಾರಾಯಣ ಪೂಜಾರಿ ಮಳಲಿ,ಪ್ರಶಾಂತ ಪೂಜಾರಿ, ಲೋಕೇಶ್ ಭರಣಿ ಕರುಣಾಕರ ಪೊಳಲಿ, ನವೀನ್, ಸಂಜೀವ ಪೂಜಾರಿ, ನೂತನ ಧ್ವಜಸ್ಥಂಭ ನಿರ್ಮಾಣ ಸಮಿತಿಯ ಸರ್ವಸದಸ್ಯರು ಸೇರಿ ಹಲವರು ಉಪಸ್ಥಿತರಿದ್ದರು.



