ಬಂಟ್ವಾಳ: ಬಂಟ್ವಾಳ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ( ರಿ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದರ 2017-18 ಸಾಲಿನ ವಾರ್ಷಿಕ ಮಹಾಸಭೆಯು ಬಿಸಿರೋಡ್‍ನ ರೋಟರಿ ಬಾಲ ಭವನದಲ್ಲಿ ನಡೆಯಿತು.
ಬಳಿಕ ವಿಟ್ಲ ಸಿಡಿಪಿಒ ಸುಧಾ ಜೋಶಿ ಮಾತನಾಡಿ, ಮುಂದಿನ ದಿನಗಳಲ್ಲಿ ನೂತನ ವರ್ಷದ ಒಕ್ಕೂಟದ ಪದಾಧಿಕಾರಿಗಳು ಬದಲಾವಣೆಯ ಹೆಜ್ಜೆಗಳನ್ನು ಹಾಕಬೇಕು. ಇಲಾಖೆಯ ಸೂಕ್ತವಾದ ಮಾಹಿತಿಯನ್ನು ಈ ಒಕ್ಕೂಟದ ಮೂಲಕ ತಿಳಿಸುವ ಮಹತ್ತರ ಜವಾಬ್ದಾರಿ ಗಳನ್ನು ಮಾಡಬೇಕು ಎಂದರು.

mahasabhe (3)
ಒಕ್ಕೂಟದ ಬೆಳವಣಿಗೆಗೆ ಸದಸ್ಯರ ಒಮ್ಮತದ ಅಭಿಪ್ರಾಯ ಹಾಗೂ ಮನಸ್ಸು ಗಳು ಬೇಕಾಗಿದೆ ಎಂದು ಹೇಳಿದರು.
ಬಂಟ್ವಾಳ ಸಿ.ಡಿ.ಪಿ.ಒ.ಮಲ್ಲಕಾ ಮಾತನಾಡಿ, ಮಹಿಳೆಯರು ಆರ್ಥಿಕ ವಾಗಿ ಸಬಲರಾಗಲು ಒಕ್ಕೂಟದ ಪಾತ್ರ ಬಹಳಷ್ಟು ಇದೆ. ಈ ಒಕ್ಕೂಟ ಇನ್ನಷ್ಟು ಪ್ರಗತಿ ಹೊಂದಲಿ ಎಂದು ಶುಭಹಾರೈಸಿದರು .

mahasabhe (1)
ಇದೇ ಸಂದರ್ಭದಲ್ಲಿ ಒಕ್ಕೂಟದ ಸದಸ್ಯ ರ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಪ್ರತಿಭಾ ಪುರಸ್ಕಾರ ಪ್ರೋತ್ಸಾಹ ಧನ ನೀಡಲಾಯಿತು.
ಬಳಿಕ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.

mahasabhe (2)
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಪುಷ್ಪ ಲತಾ ಎಂ.ಶೆಟ್ಟಿ ಪೆರುವಾಯಿ, ಶಕುಂತಲಾ , ರಂಜನಿ, ಬೆನ್ಡಿಡಿಕ್ಟಾ, ಉಷಾ ಉಕ್ಕಡ, ಲತಾ, ಉಷಾ ನರಿಕೊಂಬು, ಜೆಸಿಂತಾ ಕುವೆಲ್ಲೊ, ಸುಜಾತ ಕುರ್ನಾಡು , ಪದ್ಮಾವತಿ ಇಡ್ಕಿದು ಮತ್ತಿತರರು ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ಗಾಯಂತ್ರಿ ಕಂಬಳಿ ಸ್ವಾಗತಿಸಿ, ರಂಜನಿ ವಂದಿಸಿದರು. ಶಕುಂತಲಾ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *