ಬಂಟ್ವಾಳ: ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯದ ವತಿಯಿಂದ ಕೊಳ್ನಾಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಲಕ್ಷ್ಮೀಕೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಟಿಲ್ಟಿಂಗ್ ಗ್ರೈಂಡರ್, ಕುಡಿಯುವ ನೀರಿನ ಶುದ್ದೀಕರಣ ಯಂತ್ರ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಟೀಲಿನ ಬಟ್ಟಲನ್ನು ಮಂಗಳವಾರ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭ ಬಂಟ್ವಾಳ ತಾಲೂಕು ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಬಿ. ವಿಶ್ವನಾಥ, ಉಪಾಧ್ಯಕ್ಷ ರಮೇಶ್ ಭಂಡಾರಿ, ಕಾರ್ಯದರ್ಶಿ ಸುಧೀರ್ ಬೈಪಾಸ್, ಸಂಘಟನಾ ಕಾರ್ಯದರ್ಶಿಗಳಾದ ಗಣೇಶ್ ಸುವರ್ಣ ತುಂಬೆ, ಜಗದೀಶ ರೈ, ಪೂರ್ವಾಧ್ಯಕ್ಷರುಗಳಾದ ಸುಧಾಕರ ಸಾಲ್ಯಾನ್, ರಾಜೇಶ್ ಸಾಲ್ಯಾನ್, ಸದಸ್ಯರಾದ ರಾಜ, ಭಾಸ್ಕರ ಕುಲಾಲ್, ಅಣ್ಣು ಶಾಲಾ ಶಿಕ್ಷಕಿ ರೇಣುಕಾ, ಲಕ್ಷ್ಮಣ ಗೌಡ ಉಪಸ್ಥಿತರಿದ್ದರು. ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
