ಕುಂದಾಪುರ:ಹೆಮ್ಮಾಡಿ ಸಂತೋಷ್ ನಗರದ ನಿವಾಸಿ ಕನ್ನಡ ಕುದ್ರು ಸೇತುವೆಯಲ್ಲಿ ಮೀನು ಹಿಡಿಯುವ ಸಲುವಾಗಿ ಗಾಳ ಹಾಕಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದ ಘಟನೆ ಭಾನುವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಸಂತೋಷ್ ನಗರದ ಹೊಸಪಲ್ಲಿ ಅಮೀರ್ ಜಾನ್ ಎಂಬವರ ಪುತ್ರ ಮಹಮ್ಮದ್ ನಬಿ (23) ಎಂದು ಗುರುತಿಸಲಾಗಿದೆ.

ಕುಂದಾಪುರ ಅಗ್ನಿ ಶಾಮಕದಳದವರು ಬಂದು ನೀರಿನಿಂದ ಮೇಲೆ ತೆಗೆದು ಹೆತ್ತವರಿಗೆ ಒಪ್ಪಿಸಿದ್ದಾರೆ.
ಅಗ್ನಿ ಶಾಮಕ ಅಧಿಕಾರಿ ಕೆ.ಎನ್. ಮೊಗೆರ ಮತ್ತು ಸಿಬ್ಬಂದಿ ನಾಗರಾಜ್ ಪೂಜಾರಿ, ನೂತನ್ ಕುಮಾರ್, ಚಂದ್ರಕಾಂತ್ ನಾಯ್ಕ್ ಗೋಪಾಲ್, ಬಸವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
