ಮುಂಬಯಿ: ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಪರೀಕ್ಷೆಯಲ್ಲಿ ಮಾ| ಯಶ್ ಸುರೇಂದ್ರ ಪೂಜಾರಿ ಅವರು ಉನ್ನತ ಶ್ರೇಣಿಯ ಅಂಕಗಳನ್ನು ಗಳಿಸಿ 15ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಈ ಪರೀಕ್ಷೆಯಲ್ಲಿ ಒಟ್ಟು 600 ವಿದ್ಯಾರ್ಥಿಗಳು ಪ್ರಯತ್ನಿಸಿದ್ದಾರೆ. ಇವರಲ್ಲಿ ವಿಲೇಪಾರ್ಲೆ ಪಶ್ಚಿಮದ ನರ್ಸಿ ಮಾನ್ಜಿ ಇನ್ಸ್ಟ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ (ಎನ್ಎಂಐಎಸ್) ಕಾಲೇಜಿನ ವಿದ್ಯಾರ್ಥಿಯಾದ ಯಶ್ ಸುರೇಂದ್ರ ಪೂಜಾರಿ ಸರ್ವೋತ್ಕೃಷ್ಟ ದರ್ಜೆಯಲ್ಲಿ ಪಾಸಾಗಿದ್ದಾರೆ.

ಯಶ್ ಸುರೇಂದ್ರ ಪೂಜಾರಿ ಮುಂಬಯಿನ ಹೆಸರಾಂತ ಸಮಾಜ ಸೇವಕ, ಸಾಯಿಕೇರ್ ಲಾಜೆಸ್ಟಿಕ್ಸ್ ಲಿಮಿಟೆಡ್ನ ಕಾರ್ಯಾಧ್ಯಕ್ಷ, ಹಳೆಯಂಗಡಿ ಪಾಲಡ್ಕ ಮೂಲದ ಸುರೇಂದ್ರ ಎ.ಪೂಜಾರಿ ಮತ್ತು ಮೂಲ್ಕಿ ದಯಾಶ್ರೀ ಎಸ್.ಪೂಜಾರಿ ದಂಪತಿ ಪುತ್ರನಾಗಿದ್ದಾರೆ.

ಬಿಬಿಎ ವಿದ್ಯಾಭ್ಯಾಸವು ವಾಣಿಜ್ಯ , ಕಲೆ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕ ಪದವಿಯಾಗಿದೆ. ಬಿಬಿಎ ಪ್ರೋಗ್ರಾಮ್ ಸಾಮಾನ್ಯವಾಗಿ ಸಾಮಾನ್ಯ ಅಥವಾ ಸಣ್ಣ ವ್ಯಾಪಾರ, ಶಿಕ್ಷಣ ಮತ್ತು ನಿರ್ದಿಷ್ಟ ಸಾಂದ್ರತೆಗಳಿಗೆ ಮುಂದುವರಿದ ಕೋರ್ಸುಗಳನ್ನು ಒಳಗೊಂಡಿರುತ್ತದೆ.
ಈ ಪದವಿಯನ್ನು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ, ವ್ಯಾಪಾರದ ಸಾಂದ್ರೀಕರಣದ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ನಾಲ್ಕು ವರ್ಷಗಳ ಸಂಪೂರ್ಣ-ಸಮಯದ ಅಧ್ಯಯನದ ನಂತರ ನೀಡಲಾಗುತ್ತದೆ. ಅಂತೆಯೇ ಯೂರೋಪ್ನಲ್ಲಿ, ವ್ಯಾಪಾರದ ಸಾಂದ್ರೀಕರಣದ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ಮೂರು ವರ್ಷಗಳ ಪೂರ್ಣ-ಸಮಯದ ಅಧ್ಯಯನದ ನಂತರ ಪದವಿಯನ್ನು ನೀಡಲಾಗುತ್ತದೆ.
