ಬಂಟ್ವಾಳ: ಇಲ್ಲಿನ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಂದ್ರಗ್ರಹಣದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಶನಿವಾರ ಅಪಾರ ಮಂದಿ ಭಕ್ತರು ದೇವಸ್ಥಾನಕ್ಕೆ ಬಂದು ಶುಕ್ರವಾರ ರಾತ್ರಿ ನಡೆದ ‘ಖಗ್ರಾಸ ಚಂದ್ರಗ್ರಹಣ’ ದೋಷ ಪರಿಹಾರಕ್ಕಾಗಿ ದೇವರಿಗೆ ಎಳ್ಳೆಣ್ಣೆ ಸಮರ್ಪಣೆ ಸಹಿತ ರುದ್ರಾಭಿಷೇಕ ಮತ್ತಿತರ ಪೂಜೆ ಸಲ್ಲಿಸಿದರು.

