ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಚೆಕ್ಕಿದಕಾಡು ಪರಿಶಿಷ್ಟ ಜಾತಿ ಕಾಲನಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಸೌಲಭ್ಯಗಳ ಬಗ್ಗೆ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ಇವರು ಮಾಹಿತಿ ನೀಡಿದರು.
ಬಂಟ್ವಾಳ ತಾಲೂಕು ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೋಮಪ್ಪ ಸುರುಳಿಮೂಲೆ, ಸಂಘಟನೆಯ ಮಾಜಿ ಗೌರವಾಧ್ಯಕ್ಷ ಗೋವಿಂದ ನಾಯ್ಕ ಕುಂಡಡ್ಕ, ವಾಸು ಚೆಕ್ಕಿದಕಾಡು ಉಪಸ್ಥಿತರಿದ್ದರು. ದಿನೇಶ್ ಚೆಕ್ಕಿದಕಾಡು ಸ್ವಾಗತಿಸಿ ವಂದಿಸಿದರು.
