ಗುರುಪುರ : ಕಳೆದ ಒಂದು ತಿಂಗಳಿಂದ ಗುರುಪುರ ಪೇಟೆ ಹಾಗೂ ಒಳಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ದೂರುಗಳು ಬಂದ ಹಿನ್ನೆಲೆಯಲ್ಲಿ ಗುರುಪುರ ಗ್ರಾಮ ಪಂಚಾಯತ್ ಆಡಳಿತವು ಬುಧವಾರ(ಜುಲೈ 4) ಬೀದಿನಾಯಿಗಳ ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸಲು ತೀರ್ಮಾನಿಸಿದೆ.
ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಕಟ್ಟಿಹಾಕಿ, ಬೀದಿನಾಯಿಗಳ ಹಿಡಿಯಲು ಸಹಕರಿಸುವಂತೆ ಪಂಚಾಯತ್ ಪ್ರಕಟಣೆಯೊಂದು ವಿನಂತಿಕೊಂಡಿದೆ.

