ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತದಿಂದ ಅಡ್ಡಹೊಳೆ ತನಕ ಷಟ್ಪಥ ರಸ್ತೆ ನಿರ್ಮಾಣ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಎಲ್ ಎಂಡ್ ಟಿ. ಕಂಪೆನಿ ವತಿಯಿಂದ ಪಾಣೆಮಂಗಳೂರು ಹೊಂಡಮಯ ರಸ್ತೆಗೆ ಸಿಮೆಂಟ್ ಮಿಶ್ರಿತ ಜೆಲ್ಲಿ ಹರಡುವ ತೇಪೆ ಕಾಮಗಾರಿ ಶುಕ್ರವಾರ ಆರಂಭಗೊಂಡಿದೆ. ಸಂಚಾರಿ ಠಾಣಾಧಿಕಾರಿ ಎಲ್ಲಪ್ಪ, ಎಸೈ ಬಾಲಕೃಷ್ಣ ಗೌಡ ಮತ್ತಿತರರು ಇದ್ದಾರೆ.

