ಉಡುಪಿ : ರಾಷ್ಟ್ರೀಯ ಹೆದ್ದಾರಿ 66 ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ನವಯುಗ ಕಂಪನಿಗೆ ಕೋರ್ಟ್ ನೋಟಿಸ್ ನೀಡಿದೆ.
ರಾಷ್ಟ್ರೀಯ ಹೆದ್ದಾರಿಯ ಉಡುಪಿ ಕರಾವಳಿ ವೃತ್ತದ ಬಳಿ ಅಂಡರ್ ಪಾಸ್ ಮತ್ತು ಕುಂದಾಪುರದ ಶಾಸ್ತ್ರಿ ಪಾರ್ಕ್ ಬಳಿ ಪ್ಲೈ ಓವರ್ ಕಾಮಗಾರಿ ವಿಳಂಬವಾಗಿದೆ. ಸುಮಾರು ಆರು ವರ್ಷಗಳಿಂದ ನಿರಂತರವಾಗಿ ಕಾಮಗಾರಿ ಬಳಿಕವೂ ಪೂರ್ಣಗೊಂಡಿಲ್ಲ. ಇದರಿಂದ ಸಾಕಷ್ಟು ಅಪಘಾತಗಳು ಮತ್ತು ನಿತ್ಯವು ಟ್ರಾಫಿಕ್ ಗೊಂದಲ ನಿರ್ಮಾಣವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸೆಕ್ಷನ್ 133 ಕ್ರಿಮಿನಲ್ ಪ್ರೋಸಿಜರ್ ಕೋಡ್ 1973, 1 ಅಡಿಯಲ್ಲಿ ಕೋರ್ಟ್ ನೋಟಿಸ್ ಅನ್ನು ಕುಂದಾಪುರದ ಎಸಿ ಜಾರಿ ಮಾಡಿದ್ದಾರೆ.

