ಮಳಲಿ: ಪೊಳಲಿ ಅಮ್ಮನವರ ಭಂಡಾರದ ಮನೆಯಾದ ಪ್ರತಿಷ್ಠಿತ ಉಳಿಪ್ಪಾಡಿ ಗುತ್ತಿನ ಮನೆಗೆ ಮಂಗಳವಾರ ಸಚಿವ ಬಿ. ರಮಾನಾಥ ರೈ ಭೇಟಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಸಚಿವ ರಮಾನಾಥ ರೈ ಅವರು ಮುಂಬರುವ ಪೊಳಲಿ ಅಮ್ಮನವರ ಜಾತ್ರೋತ್ಸವ ಸುಸೂತ್ರವಾಗಿ ನೆರವೇರಲಿ ಹಾಗೂ ಅಮ್ಮನವರ ಬ್ರಹ್ಮಕಲಶೋತ್ಸವ ಜೀರ್ಣೊದ್ಧಾರ ಕಾರ್ಯವು ಪರಿಪೂರ್ಣವಾಗಲಿ ಎಂದು ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಲೂಕು ಉಪಾಧ್ಯಕ್ಷ ಅಬ್ಬಾಸ್ ಆಲಿ ಮತ್ತಿತರರು ಉಪಸ್ಥಿತರಿದ್ದರು.


