ಸುದ್ದಿ9 ಕೈಕಂಬ :ಜಿಲ್ಲಾ ಕಂಬಳದ ವಾರ್ಷಿಕ ಮಹಾಸಭೆಯು   ಭಾನುವಾರ ಆ.10ರಂದು  ಮೂಡಬಿದ್ರೆ ಸಮಾಜ ಮಂದಿರದಲ್ಲಿ  ನಡೆಯಿತು. ಉಭಯ ಜಿಲ್ಲೆಗಳ ಎಲ್ಲಾ  ಕಂಬಳ ವ್ಯವಸ್ಥಾಪಕರು ಸ್ಪರ್ಧಾ ಕೋಣಗಳ ಯಜಮಾನರು, ತೀರ್ಪ್ ಗಾರರು , ಕಂಬಳ ಅಭಿಮಾನಿಗಳು ಎಲ್ಲಾ ವಿಭಾಗದ ಕೋಣ ಓಡಿಸುವವರು  ಸಭೆಯಲ್ಲಿ ಭಾಗವಹಿಸಿದ್ದರು.

IMG-20140812-WA0007ಈ ಸಭೆಯಲ್ಲಿ 2013-14ನೇ ಸಾಲಿನ ಸರಣಿ ಪ್ರಶಸ್ತಿ ವಿಜೇತರನ್ನು  ಸಮಿತಿಯ ಅಧ್ಯಕ್ಷ  ಭಾಸ್ಕರ ಕೋಟ್ಯಾನ್  ಇರ್ವತ್ತೂರು, ಕಾರ್ಯದರ್ಶಿ ಸುರೇಶ ಪೂಜಾರಿ ರೆಂಜಾಳ , ಸುರೇಶ್ ಎಮ್ ಶೆಟ್ಟಿ  ,  ಬಾರ್ಕೂರು ಶಾಂತರಾಮ ಶೆಟ್ಟಿ ಅವರುಗಳ ಉಪ ಸ್ಥಿತಿಯಲ್ಲಿ ಯುವಜನ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ , ಸುರೇಶ್ ಜೈನ್  ಮೂಡಬಿದ್ರೆಅವರು ಕಂಬಳದ ಅತ್ಯತ್ತಮ ಶ್ರೇಷ್ಟ ವ್ಯವಸ್ಥಾಪಕ  ಪ್ರಶಸ್ತಿಗಳ್ಲನ್ನು ಕಂಬಳದ ಎಲ್ಲಾ ವಿಭಾಗದ ಓಟಗಾರರಾದ     ಕರಿಂಜೆ ವಿಶ್ವನಾಥ ಶೆಟ್ಟಿ, ಬೋಳದ ಗುತ್ತು ಸತೀಶ್ ಶೆಟ್ಟಿ , ಅಂಕರಜಾಲ್ ಬಿರ್ಮಣ ಶೆಟ್ಟಿ, ನಂದಳಿಕೆ ಶ್ರೀಕಾಂತ್ ಭಟ್, ಕಾಂತಾವಾರ ಗುರುಪ್ರಸಾದ್ ಕೋಟ್ಯಾನ್,ಶಿರೂರು ಗೋಪಾಲ ನಾಯಕ್ , ನೆಕ್ರೆ ಜಯಕರ ಮಡಿವಾಳ, ಹಕ್ಕೇರಿ ಸುರೇಶ್ ಎಮ್ ಶೆಟ್ಟಿ, ಮುಳಿಕಾರ್ ಅಣ್ಣಿ ದೇವಾಡಿಗ,ಇರ್ವತ್ತೂರು ಆನಂದ ಅವರುಗಳನ್ನು  ಪುರಸ್ಕರಿಸಿ ಅಭಿನದಿಸಲಾಯಿತು.

By suddi9

Leave a Reply

Your email address will not be published. Required fields are marked *