ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೊದ್ದಾರದ ಕೆಲಸ ಕಾರ್ಯಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ಊರ ಹಾಗೂ ಪರಊರಿನ ಸಂಘಸಂಸ್ಥೆಗಳು ಸಾವಿರ ಸೀಮೆಯ ಭಕ್ತಾಧಿಗಳು ದೇವಳದ ಕೆಲಸಕಾರ್ಯಗಳಲಲ್ಲಿ ಭಾಗವಹಿಸುತ್ತಿದ್ದು ಈಗಾಗಲೆ ನಾನಾ ಕಾಲೇಜುಗಳ ವಿದ್ಯಾರ್ಥಿಗಳು ಕರಸೇವೆಯಲ್ಲಿ ಭಾಗಿಯಾಗಿದ್ದು ಇಲ್ಲಿಯ ವಿಶೇಷತೆ.
ಅಂತೆಯೇ ಇಂದು ಮಂಗಳವಾರ ಮಂಗಳೂರಿನ ಬೆಸೆಂಟ್ ಮಹಳಾ ಕಾಲೇಜು ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಕರಸೇವೆಯಲ್ಲಿ ಬಾಗಿಯಾಗಿದ್ದರು. ಉಪನ್ಯಾಸಕರಾದ ಕಷ್ಣಾನಂದ ಶಣ್ಯೆ, ರವಿಪ್ರಭಾ, ಮಂಜುನಾಥ್ ಕಾಮತ್ ಹಾಗೂ ಕುಮಾರಿ ದಿವ್ಯ ಅವರು ಭಾಗವಹಿಸಿದ್ದರು.


