ಬಂಟ್ವಾಳ: ಪಾಶ್ಚಾತ್ಯ ಮಹಿಳೆಯಾದರು ಕೂಡ ಭಾರತೀಯ ಸಂಸೃತಿಯನ್ನು ಆರಾಧಿಸುತ್ತಾ ಭಾರತದ ಜನರ ಸೇವೆಯನ್ನು ಆಹರ್ನಿಶಿಯಾಗಿ ಮಾಡಿದ ನೀವೆದಿತಾ ಭಾರತೀಯ ಮಹಿಳೆಯಲ್ಲೆರಿಗೂ ಆದರ್ಶ ಪ್ರಾಯರಾಗಿದ್ದಾರೆ ಎಂದು ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಭಾರತಿ ಎಸ್ ಚೌಟ ಹೇಳಿದರು. ಅವರು ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾದ ಆಶ್ರಯದಲ್ಲಿ ಸೋದರಿ ನೀವೆದಿತಾ ಜಯಂತಿ ಕಾರ್ಯಕ್ರಮದಲ್ಲಿ ಸೋದರಿ ನೀವೆದಿತಾರವರ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರು ಜಿ.ಆನಂದ, ಕ್ಷೇತ್ರ ಪ್ರಧಾನಕಾರ್ಯದರ್ಶಿ ಮೋನಪ್ಪ ದೇವಸ್ಯ,ಜಿ.ಪಂ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ತಾ.ಪಂ ಸದಸ್ಯೆ ಲಕ್ಷ್ಮೀಗೊಪಾಲಾಚಾರ್ಯ, ಲಿಖಿತ ಆರ್ ಶೆಟ್ಟಿ, ಬೇಬಿ ಚೌಟ, ಚಂದ್ರಾವತಿ, ಲಕ್ಷ್ಮೀ ಜೆ ಬಂಗೇರ, ಸುಮಿತ್ರ ಉಪಸ್ಥಿತರಿದ್ದರು.

