ಕುಪ್ಪೆಪದವು: ರಾಷ್ಟ್ರಪಿತ ಮಹತ್ಮಗಾಂಧೀಜಿ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರೀಜಿ ಅವರ ಜುಯಂತಿಯನ್ನು ಕುಪ್ಪೆಪದವು ಜೆಡಿಎಸ್ ವಲಯದ ವತಿಯಿಂದಜೆಡಿಎಸ್ ಪಕ್ಷದ ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಗಾಂಧೀಜಿಯವರ ಸಿಧಾಂತವನ್ನು ಶಾತ್ರೀಜಿಯವರ ಆಡಳಿತ ಶೈಲಿಯನ್ನು ನಿತ್ಯ ಜೀವನದಲ್ಲಿ ಅಳವಡಿಸುವಂತೆ ವಲಯದ ಅಧ್ಯಕ್ಷ ಎಂ. ಜಗನಾಥ ರೈ ಹೇಳಿದರು. ಮುಖ್ಯ ಅತಿಥಿಗಳಾಗಿ ಡಿ.ಪಿ.ಹಮ್ಮಬ್ಬ , ಮಹಮ್ಮದ್ ಶರೀಫ್ಕಜೆ ಭಗವಹಿಸಿದ್ದರು.ಪಕ್ಷದ ಮುಖಂಡರುಗಳಾದ ಚಂದ್ರಶೇಖರ ಪೂಜಾರಿ,ಉಮೇಶ್ ಪೂಜಾರಿ, ಜಯ ಪೂಜಾರಿ,ವಾಮನ ಪೂಜಾರಿ,ಜಯ ಕುಮಾರ್ಮತ್ತು ಗಂಗಾಧರ ನಾಯಕ್ ಉಪಸ್ಥಿತರಿದ್ದರು.ನವಾಝ ಸ್ವಾಗತಿಸಿ,ಝೌಹರ್ ಸಫ್ವಾನ್ ವಂದಿಸಿದರು. ಇಸ್ಮಾಯಿಲ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು.
