ಪೊಳಲಿ: ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರದ್ಧಾಕೇಂದ್ರದ ಪುನರುತ್ಥಾನದ ಕುರಿತಾಗಿ ರಚಿಸಲ್ಪಟ್ಟಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿ ಪುನರುತ್ಥಾನ ಸಮಿತಿಯ ಪೊಳಲಿ ವಲಯದ ಪೊಳಲಿ ವಲಯದ ಕರಿಯಂಗಳ, ಅಮ್ಮುಂಜೆ , ಬಡಗಬೆಳ್ಳೂರು, ತೆಂಕಬೆಳ್ಳೂರು ಇಲ್ಲಿಯ ಕಾರ್ಯಕಾರಿಣಿ ಪದಾದಿಕಾರಿಗಳ ಆಯ್ಕೆಯು ಗುರುವಾರ ಪೊಳಲಿಯ ಸರ್ವಮಂಗಳ ಸಭಾಂಗಂಣದಲ್ಲಿ ಭುವನೇಶ್ ಪಚಿನಡ್ಕ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಗೌರವಾಧ್ಯಕ್ಷರಾಗಿ ಗಂಗಾಧರ ಪೂಜಾರಿ ಕೊಪ್ಪಳ , ಅದ್ಯಕ್ಷರಾಗಿ ವಾಮನ್ ಪೂಜಾರಿ ಸೂರ್ಲ ಮಣಿಕಂಠಪುರ , ಉಪಾಧ್ಯಕ್ಷರಾಗಿ ಗಂಗಯ್ಯ ಪೂಜಾರಿ ಅಮ್ಮುಂಜೆ ಕಾರ್ಯದರ್ಶಿಯಾಗಿ ರಾಜು ಕೋಟ್ಯಾನ್ ಗರೋಡಿ , ಕೋಶಾಧಿಕಾರಿಯಾಗಿ ಯಶವಂತ್ ಕೋಟ್ಯಾನ್ ಪೊಳಲಿ, ಉಪಕಾರ್ಯದರ್ಶಿಯಾಗಿ ಮೋಹನ್ ಬಿಲ್ವಪತ್ರೆ, ರವೀಂದ್ರ ಸುವರ್ಣ ಕಣಿಯೂರು, ಗೌರವ ಸಲಹೆಗಾರರಾಗಿ ದೇವಪ್ಪ ಪೂಜಾರಿ ಬಾಳಿಕೆ , ಇಂದ್ರೇಶ್, ಪದ್ಮರಾಜ್ ಕರಿಯಂಗಳ , ರಮೇಶ್ ಬಟ್ಟಾಜೆ, ನವೀನ್ ಬೆಂಜನಪದವು, ಸೀತಾರಾಮ್ ಪೂಜಾರಿ ತೆಂಕಬೆಳ್ಳೂರು, ಶಶಿಕಿರಣ್ ಬಡಗಬೆಳ್ಳೂರು , ಪ್ರಸಾದ್ ಗರೋಡಿ , ಉಮೇಶ್ ಬಾರಿಂಜೆ ಇವರುಗಳನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಟ್ರಸ್ಟಿಯ ಮೋಹನ್ದಾಸ್ ಬಂಗೇರಾ ವಾಮಂಜೂರು , ರಾಜೇಂದ್ರ ಹಾಗೂ ಬಿಲ್ಲವ ಬಾಂಧವರು ಉಪಸ್ಥಿತರಿದ್ದರು.





