ಮಂಗಳೂರು: ವಿಶ್ವದಲ್ಲೇ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆ ಎಂದು ಗುರುತಿಸಲ್ಪಟ್ಟಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಇದರ ಕರ್ನಾಟಕ ವಿಭಾಗ ಮಟ್ಟದ ಅಭ್ಯಾಸವರ್ಗ ಶ್ರವಣಬೆಳಗೋಳದಲ್ಲಿ ಇತ್ತೀಚೆಗೆ ನಡೆಯಿತು.ಕೊಡಗು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನೊಳಗೊಂಡ ಮಂಗಳೂರು ವಿಭಾಗ ಸಂಚಾಲಕರಾಗಿ ಚೇತನ್ ಪಡೀಲ್ ಹಾಗೂ ಮಂಗಳೂರು ಜಿಲ್ಲಾ ಸಂಚಾಲಕರಾಗಿ ಸುದಿತ್ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯ್ತು.
ಇಬ್ಬರೂ ನಾಯಕರು ಉತ್ತಮ ಸಂಘಟನಾ ಚತುರತೆ ಉಳ್ಳವರಾಗಿದ್ದು ಈ ಹಂದೆ ಕೂಡ ವಿದ್ಯಾರ್ಥಿ ಪರಿಷತ್ತಿನಲ್ಲಿ ಹಲವಾರು ಜಾವಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸಿದ್ದರು.
