ಬಂಟ್ವಾಳ :ವಾಮದಪದವು ಸಮಿಪದ ಕುಕ್ಕಿಪಾಡಿ ಹಲಾಯಿ ಶಿವಾಜಿ ಫ್ರೆಂಡ್ಸ್ ಕಟ್ಟೆಯನ್ನು ಯಾರೋ ಕಿಡಿಕೇಡಿಗಳು ಧ್ವಂಸಗೈದ ಘಟನೆ ಗುರುವಾರ ನಡೆದಿದೆ.ಶುಕ್ರವಾರ ಬೆಳಿಗ್ಗೆ ಈಬಗ್ಗೆ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಸೇರಿದರು. ಹಾಗೆಯೇ ಸ್ಥಳೀಯ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರರವರು ಸ್ಥಳಕ್ಖಾಗಮಿಸಿ ಕಿಡಿಗೇಡಿಗಳ ಕ್ರತ್ಯ ವನ್ನು ಖಂಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.ಪರಿಸರದಲ್ಲಿ ಅಶಾಂತಿ ಸ್ರಷ್ಟಿಸಲು ಈಕ್ರತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ.ಈಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
