ಬಂಟ್ವಾಳ: ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಹಿರಿಯಡಕ ಇದರ ರಜತ ಸಂಭ್ರಮದ ಅಂಗವಾಗಿ ನಡೆದ ವಿನೋದ ಕ್ರೀಡಾಕೂಟವನ್ನು ಭಾನುವಾರ ಜನವರಿ 22ರಂದು ವೈದ್ಯರಾದ ಡಾ. ದೇವದಾಸ ಕಾಮತ್ ಇವರು ಉದ್ಘಾಟಿಸಿದರು. ದಿವ್ಯ ಮರಾಠೆ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ, ಅಧ್ಯಕ್ಷ ದಿವಾಕರ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ದೇವದಾಸ ಮರಾಠೆ ವಂದನೆಗೈದರು. ರಾಘವೇಂದ್ರ ಜಿ ಕಾರ್ಯಕ್ರಮ ನಿರ್ವಹಿಸಿದರು.


