ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ಅದ್ಯಕ್ಷ ಯುವ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಯುವ ಸಮಾಜಿಕ ಚಟುವಟಿಕೆಗಳಿಗೆ ಕರ್ನಾಟಕ ಸಾಂಸ್ಕ್ರತಿಕ ಅಕಾಡೆಮಿ ವತಿಯಿಂದ ನೀಡಲಾಗುವ ಕರ್ನಾಟಕ ಭೂಷಣ ಪ್ರಶಸ್ತಿಯನ್ನು ಅಕ್ಟೋಬರ್.27 ಗುರುವಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನಯನ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ,ಮಾಜಿ ಕೇಂದ್ರ ಸಚಿವ ಎಂ ರಾಜಶೇಖರನ್,ಮಾಜಿ ಸಚಿವ ಎಂ.ಪಿ ನಾಡಗೌಡ,ವಿಶ್ರಾಂತ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅರಳಿ ನಾಗರಾಜ, ಚಲನಚಿತ್ರ ನಟಿ ಶೃತಿ, ಜಹಿರುದ್ದಿನ್, ಡಾ|| ರಾಜು ಮುಂತಾದವರು ಭಾಗವಹಿಸಿದ್ದರು.

