ಉಡುಪಿ:ಜೇಸಿಐ ಉಡುಪಿ ಸಿಟಿಗೆ ಜೇಸಿ ವಲಯ 15 ರ ವಲಯಾದ್ಯಕ್ಷ ಸಂದೀಪ್ ಕುಮಾರ್ ರವರ ಅಧಿಕೃತ ಭೇಟಿ ಕಾರ್ಯಕ್ರಮ ಆಗಸ್ಟ.28 ರಂದು ಶಾಂತಿನಗರದಲ್ಲಿ ನ ಭವನದಲ್ಲಿ ನಡೆಯಿತು.ಈ ಸಂದರ್ಭ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ಉಡುಪಿ ಸಿಟ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ವಹಿಸಿದ್ದರು.
ವೇದಿಕೆಯಲ್ಲಿ ನಿಕಟಪೂರ್ವ ಅದ್ಯಕ್ಷ ವಿನಯ್ ಆಚಾರ್ಯ,ಕಾರ್ಯದರ್ಶಿ ಜಗದೀಶ್ ಶೆಟ್ಟಿ,ವಲಯ ಉಪಾದ್ಯಕ್ಷ ಮಂದಾರ ಕಾಳೆ,ವಲಯ ಅಧಿಕಾರಿ ಶಕೀರ್ ಹಾವಂಜೆ ಮುಂತಾದವರಿದ್ದರು.ಕಾರ್ಯಕ್ರಮದಲ್ಲಿ ಪೂರ್ವ ಅದ್ಯಕ್ಷರುಗಳು ಮತ್ತು ಸದಸ್ಯರು ಭಾಗವಹಿಸಿದ್ದರು.ರಪೀಕ್ ಖಾನ್ ರವರನ್ನು ಗೌರವಿಸಲಾಯಿತು.
