ಬಿಎಂಎಸ್ ವಿಟ್ಲ ಇದರ ವತಿಯಿಂದ ವಿಟ್ಲ ಭಗವತಿ ದೇವಸ್ಥಾನದಲ್ಲಿ ರಕ್ಷಾ ಬಂಧನ ಆಚರಿಸಲಾಯಿತು. ರಕ್ಷಾ ಬಂಧನದ ಮಹತ್ವದ ಬಗ್ಗೆ ಪುತ್ತೂರು ಮಂಡಲ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ ಹರಿಪ್ರಸಾದ್ ಯಾದವ್ ಭೌದಿಕ್ ನೀಡಿದರು. ಈ ಸಂದರ್ಭದಲ್ಲಿ ಬಿ ಎಂ ಎಸ್ ಕಾರ್ಯಕರ್ತ ನಾರಾಯಣ ಚಂದಳಿಕೆಯವರು ಹೃದಯ ಸಂಭಂದಿ ರೋಗದಿಂದ ಬಳಲುತ್ತಿದ್ದು ಅವರ ಚಿಕಿತ್ಸಾ ವೆಚ್ಚಕ್ಕೆ 10,000 ನಗದನ್ನು ಬಿ ಎಂ ಎಸ್ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಬಿ ಎಂ ಎಸ್ ಅಧ್ಯಕ್ಷ ಪ್ರಸಾದ್ ಕೂಜಪ್ಪಾಡಿ, ಸಂಘಟನಾ ಕಾರ್ಯದರ್ಶಿ ರವಿ ಕೂಡೂರು, ಸದಸ್ಯರುಗಳಾದ ಯಾದವ, ಸದಾಶಿವ ಗೌಡ, ವಸಂತ ಅನಿಲಕಟ್ಟೆ, ಮಧುಕರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ ಮೂಡಂಬೈಲು, ದಯಾನಂದ ಉಜಿರೆಮಾರು, ಸಂಘದ ಪ್ರಮುಖ್ ವಿಘ್ನೇಶ್ ಮೊದಲಾದವರು ಉಪಸ್ತಿತರಿದ್ದರು.

rb

By suddi9

Leave a Reply

Your email address will not be published. Required fields are marked *