ಉಡುಪಿ:- ಕವಯತ್ರಿ,ಸಾಹಿತಿ ಮತ್ತು ಉದ್ಯಮಿ ಪೂರ್ಣಿಮಾ ಸುರೇಶ್ ನಾಯಕ್ ರವರಿಗೆ ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಜೇಸಿ ವಲಯ 15 ವತಿಯಿಂದ ಜೇಸಿ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಆಗಸ್ಟ 14 ರಂದು ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೇಸಿ ರಾಷ್ಠಿಯ ಅದ್ಯಕ್ಷೆ ರಾಜಶ್ರೀ ಭಜೆಯವರು ಮತ್ತು ವಲಯಾದ್ಯಕ್ಷ ಸಂದೀಪ್ ಕುಮಾರ್ ರವರು ಪ್ರಶಸ್ಥಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ರಾಷ್ಟೀಯ ನಿರ್ದೆಶಕ ಸಚಿನ್ ಕುಟ್ಟಿಕಾರ್,ವಲಯ ನಿರ್ದೇಶಕರಾದ ರತ್ನಾಕರ ಇಂದ್ರಾಳಿ,ಸ್ಯಾಮುವೆಲ್ ಸಾಲಿನ್ಸ್,ಉಡುಪಿ ಸಿಟ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು,ಕಾರ್ಯದರ್ಶಿ ಜಗದೀಶ್ ಶೆಟ್ಟಿ ಶಕೀರ್ ಹಾವಂಜೆ ಮುಂತಾದವರು ಉಪಸ್ಥಿತರಿದ್ದರು.

