ಬೆಳ್ತಂಗಡಿ:ಉಜಿರೆ ಪೇಟೆಯಲ್ಲಿರುವ ಮಾರಿಗುಡಿಗೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ಕಾಣಿಕೆ ಡಬ್ಬ ಹೊಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ ಒಳಗಿದ್ದ ಕೆಲ ವಸ್ತುಗಳನ್ನೂ ಅಪಹರಿಸಿದ್ದಾರೆ.
ಉಜಿರೆ ಪೇಟೆಯಲ್ಲಿಯೇ ಇರುವ ಚಿನ್ನದ ಅಂಗಡಿಯಿಂದಕ್ಕೆ ನುಗ್ಗಲು ಪ್ರಯತ್ನಿಸಿದ ಕಳ್ಳರು ಶಟರ್ ನ ಬೀಗ ಒಡೆದಿದ್ದಾರೆ ಆದರೆ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಯಾವುದೋ ವಾಹನಗಳು ಬಂದ ಹಿನ್ನೆಲೆಯಲ್ಲಿ ಕಳ್ಳತನದಿಂದ ಪ್ರಯತ್ನ ಬಿಟ್ಟು ಪರಾರಿಯಾಗಿರ ಬೇಕು ಎಂದು ಹೇಳಲಾಗಿದೆ.
ಬೆಳಿಗ್ಗೆ ಕಳ್ಳತನದಿಂದ ಮಾಹಿತಿ ಪಡೆದು ಬೆಳ್ತಂಗಡಿ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ