ಮುಂಬಯಿ,ಮೇ.29: ಇನ್ನೆರಡು ವಾರಗಳ ಒಳಗಾಗಿ ಮುಂಗಾರು ಮಳೆ ಮುಂಬಯಿಯನ್ನು ತಲುಪಲಿದ್ದು ಈ ಬಾರಿಯ ಮಳೆಗಾಲದ ಪೂರ್ವಸಿದ್ಧತೆಯಲ್ಲಿ ಬೃಹನ್ಮುಂಬಯಿ ಮುನ್ಸಿಪಾಲ್ ಕಾಪೆರ್Çೀರೇಶನ್ (ಬಿಎಂಸಿ) ತೊಡಗಿಸಿ ಕೊಂಡಿದೆ. ರಾಜ್ಯ ಶಾಸನದ ಕಟ್ಟೆಚ್ಚರಿಕೆ ಹಾಗೂ ನಗರವಾಸಿ ಜನತೆಯ ಸುರಕ್ಷತೆಯ ನಿಟ್ಟಿನಲ್ಲಿ ಬಿಎಂಸಿಯ ಎಸ್-ವಾರ್ಡ್ನ ಸಹಾಯಕ ಆಯುಕ್ತೆ ಚಂದ್ರ ಜಾಧವ್ ಅವರು ಎಲ್ಬಿಎಸ್ ಮಾರ್ಗದಲ್ಲಿನ ವಿಕ್ರೋಲಿಯಿಂದ ಭಾಂಡೂಪ್ ವರೆಗೆ ಒಳಚರಂಡಿ (ಡ್ರೈನೇಜ್)ಗಳ ಸ್ವಚ್ಛತೆ ಪರಿಶಿಲಿಸಿ ಕಾರ್ಯನಿರ್ವಹಣೆ ನಡೆಸಿದರು. ಬಿಎಂಸಿಯ ಇಂಜಿನೀಯರುಗಳು, ಹತ್ತಾರು ಕರ್ಮಚಾರಿಗಳು, ಡಂಪರ್, ಪೆÇೀಕ್ಲೇನ್ ಮುಖೇನ ಡ್ರೈನೇಜ್ ಸ್ವಚ್ಛತೆ ಕ್ರಮಕೈಗೊಂಡರು.




