ಬಂಟ್ವಾಳ: ಪುರಸಭೆಯ ರೇಚಕ ಸ್ಥಾವರದಿಂದ ನೀರು ಸರಬರಾಜುಗುವ ಪೈಪ್ಲೈನಲ್ಲಿ ದೋಷಕಾಣಿಸಿಕೊಂಡು ನೀರಿನ ಸಮಸ್ಯೆ ಉಂಟಾಗಿದೆ. ಪುರಸಭೆಗೆ ದೂರು ನೀಡಿದ್ದರೂ ಪೈಪ್ಲೈನ್ ದುರಸ್ತಿ ಪಡಿಸಲು ಪುರಸಭಾ ಆಡಳಿತ ಮುಂದಾಗಿಲ್ಲ.

ಜಕ್ರಿಬೆಟ್ಟು ರೇಚಕ ಸ್ಥಾವರದಿಂದ ಬಿ.ಸಿ.ರೋಡು ಪ್ರದೇಶಕ್ಕೆ ಪೂರೈಕೆಯಾಗುವ ನೀರಿನ ಪೈಪ್ಲೈನಲ್ಲಿ ಶುಕ್ರವಾರ ಸಂಜೆಯಿಂದ ದೋಷ ಕಾಣಿಸಿಕೊಂಡು ಭಂಡಾರಿಬೆಟ್ಟು, ಮಯ್ಯರಬೈಲು, ಬಿ.ಸಿ.ರೋಡು, ಗೂಡಿನ ಬಳಿ, ಪಾಣೆಮಂಗಳೂರು ಮತ್ತಿತರ ಪ್ರದೇಶಗಳಲ್ಲಿ ಜನರು ಮೂರು ದಿನಗಳಿಂದ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಪೈಪ್ಲೈನ್ ದುರಸ್ತಿ ಪಡಿಸುವ ಬಗ್ಗೆ ಮೀನಾ ಮೇಷ ಎಣಿಸುತ್ತಿರುವ ಪುರಸಭೆಯ ಕಾರ್ಯವೈಖರಿ ನಾಗರೀಕರ ಟೀಕೆಗೆ ಕಾರಣವಾಗಿದೆ.
