ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ಬಂಟ್ವಾಳ ತಾಲೂಕು ಇದರ ಆಡಳಿತ ಮಂಡಳಿ ಚುನಾವಣೆಯಲ್ಲಿ ಮುಂದಿನ 5 ವರ್ಷಗಳಿಗೆ ನಿರ್ದೇಶಕರಾಗಿ ಅಶೋಕ್ ಕುಮಾರ್ , ಬಿ ನಾರಾಯಣ ಮೂಲ್ಯ, ಜಗನ್ನಾಥ ಆಳ್ವ, ಪದ್ಮನಾಭ ಗೌಡ, ಎನ್ ದಿಲೀಪ್ ಕುಮಾರ್ ಉಮೇಶ ಎನ್, ಜಯಂತಿ, ಶಶಿಕಲಾ ಕೆ, ಪದ್ಮನಾಭ ಕೆ ಬಂಗೇರ , ವೆಂಕಪ್ಪ ಪೂಜಾರಿ, ಕೇಶವ ನಾಯ್ಕ ಅವಿರೋಧ ವಾಗಿ ಆಯ್ಕೆಯಾಗಿರುತ್ತಾರೆ. ಇವರಲ್ಲಿ ಎನ್.ದಿಲೀಪ್ ಕುಮಾರ್ ನಡ್ಚಾಲ್ ಅಧ್ಯಕ್ಷರಾಗಿ ಹಾಗೂ ಶಶಿಕಲಾ ಕೆ ಕುಮೇರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಬಂಟ್ವಾಳ ತಾಲೂಕು ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾರದಾ.ಎ ಇವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣೆಯನ್ನು ಕ್ರಮ ಬದ್ಧವಾಗಿ ನಿರ್ವಹಿಸಿದರು.

