ಬಂಟ್ವಾಳ: ಮಾನಸಿಕ ಶಾಂತಿ ಮಾನವನಿಗೆ ಅತಿ ಮುಖ್ಯ ವಾದುದು ಅದನ್ನು ದೇವಾಲಯ ಮತ್ತು ದೈವ ಸ್ಥಾನಗಳಲ್ಲಿ ಮಾತ್ರ ಪಡೆಯಲು ಸಾದ್ಯ ಜೀವನದಲ್ಲಿ ನೆಮ್ಮದಿಯ ಅನುಭವ ವಾದಾಗ ಶುದ್ಧ ವಾದ ನಗು ಹೊರಬರುತ್ತದೆ ನಂಜನ್ನು ಉಂಡಿರುವ ನಂಜುಂಡೆಶ್ವರ ನಂತೆ ಕೆಟ್ಟದ್ದನ್ನು ಉಂಡು ಉತ್ತಮ ವಾದುದ್ದನ್ನು ಸಮಾಜಕ್ಕೆ ಕೊಡಬೇಕು ಅಶಾಂತಿ ಎಂಬ ಕಾಯಿಲೆ ಯನ್ನು ದೂರ ಮಾಡಿ ಸುಸ್ಥಿರ ಸಮಮಾಜ ಕಟ್ಟಲು ನಾವು ಮುಂದಾಗ ಬೇಕು ಮನಸು ಮತ್ತು ಮಾತು ಒಂದಾಗಿದ್ದರೆ ಜೀವನ ಸುಂದರ ವಾಗಿರುತ್ತದೆ ಭಗವಂತನಲ್ಲಿ ಶ್ರದ್ದೆ ಇಟ್ಟಾಗ ಇವೆಲ್ಲವನ್ನು ಪಡೆಯಲು ಸಾದ್ಯ ಎಂದು ಅದಮಾರು ಮಠ ದ ಶ್ರೀ ಶ್ರೀ ವಿಶ್ವ ಪ್ರೀಯ ತೀರ್ಥ ಶ್ರೀಪಾದಂಗಳವರು ಹೇಳಿದರು ಅವರು ಅರ್ಕುಳ ಸ್ವಯಂಭೂ ಶ್ರೀ ವರದೇಶ್ವರ ಸನ್ನಿದಿ ಯಲ್ಲಿ ನಡೆದ ಬ್ರಹ್ಮಕಲಶಾಭಿಷೇಕ ಸಂದರ್ಭ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಸದಾನಂದ ಆಳ್ವ ಅರ್ಕುಳ ಕಂಪ , ಸುಂದರ ಶೆಟ್ಟಿ ಕಲ್ಲ ತಡಮೆ , ಪೊಳಲಿ ಕೃಷ್ಣ ತಂತ್ರಿ ದಂಪತಿ ಗಳು , ಪೊಳಲಿ ಸುಬ್ರಮಣ್ಯ ತಂತ್ರಿ ಗಳು ಉಪಸ್ಥಿತರಿದ್ದರು , ಸಾಂಸದ ನಳಿನ್ ಕುಮಾರ್ ಕಟೀಲು , ಒಡಿಯೂರಿನ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ , ಶ್ರೀ ಕ್ಷೇತ್ರ ಕ್ಕೆ ಬೇಟಿ ನೀಡಿದರು , ಪ್ರಾತ ಕಾಲ ಪರಿ ಕಲಶ ಸಹಿತ ವರದೆಶ್ವರ ನಿಗೆ ಮತ್ತು ಮಹಾ ಗಣಪತಿ ದೇವರಿಗೆ ಬ್ರಹ್ಮ ಕಲಶಾಭಿಷೇಕ ನಡೆಯಿತು ಸುರೇಶ ಕೆದಿಲಾಯ ಮತ್ತು ರಂಜಿತ್ ಕುಮಾರ್ ಕಲ್ಲೂರಾಯ ವೇದ ಮಂತ್ರ ಪಠಣ ಮಾಡಿದರು ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿ ರಾಮಚಂದ್ರ ರಾವ್ ನಿರೂಪಿಸಿದರು , ಸುರೇಶ ಶೆಟ್ಟಿ ಬರ್ಕೆ ವಂದಿಸಿದರು ,

