ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಬಸ್ಸು ತಂಗುದಾಣವನ್ನು ಕರಿಯಂಗಳ ಗ್ರಾಮಪಂಚಾಯತಿಗೆ ಹಸ್ತಾಂತರಿಸಲಾಯಿತು. ಕೈಕಂಬ ಶ್ರೀರಾಮ್ ಹೋಟೆಲ್ ಮಾಲಕ ಶ್ರೀಮತಿ ಸರೋಜ ಹರಿರಾವ್ ಅವರ ಪುತ್ರ ಪ್ರಸಾಂತ್ ರಾವ್ ಅವರ ಸ್ಮಾರಣಾರ್ಥವಾಗಿ ನಿರ್ಮಿಸಿದ ಸುಸಜ್ಜಿತವಾದ ಬಸ್ಸು ತಂಗುದಾಣವನ್ನು ಕೈಕಂಬ ಶ್ರೀ ರಾಮ್ ಹೋಟೇಲ್ ಮಾಲಕ ಶ್ರೀಮತಿ ಸರೋಜ ಹರಿರಾವ್ ಉದ್ಘಾಟಿಸಿದರು.


ಪ್ರಸನ್ನರಾವ್ ಹಾಗೂ ಅವರ ಕುಟುಂಬಸ್ತರು ಕರಿಯಂಗಳ ಗ್ರಾಮಪಂಚಾಯತಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾ. ಪಂಚಯತ್ ಅಧ್ಯಕ್ಷೆ ಚಂದ್ರಾವತಿ, ಪಿಡಿಓ ನವೀನ್ ಭಂಡಾರಿ, ಉಪಾದ್ಯಕ್ಷ ಚಂದ್ರಶೇಖರ ರಾವ್ , ಅಮ್ಮುಂಜೆ ಗ್ರಾ, ಪಂ. ಉಪಾಧ್ಯಕ್ಷ ವಾಮನ ಆಚಾರ್ಯ, ಮಾಜಿ ತಾಲೂಕು ಪಂ. ಸದಸ್ಯ ವೆಂಕಟೇಶ್ ನಾವಡ, ಸಂಜೀವ ಪೂಜಾರಿ , ನಾಗೇಶ್ ಪೊಳಲಿ ಹಾಗೂ ಕರಿಯಂಗಳ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಯಶವಂತ ಕೋಟ್ಯಾನ್, ಕರಿಯಂಗಳ ಗ್ರಾ. ಪಂ.ಸದಸ್ಯರಾದ ಲೋಕೇಶ್ ಭರಣಿ, ಕಿಶೋರ್ ಪಲ್ಲಿಪಾಡಿ, ಸುರೇಶ್ ಮಣಿಕಂಠಪುರ, ಗೋಪಲಕೃಷ್ಣ ಶೆಟ್ಟಿ , ನವಾಜ್ ಬಡಕಬೈಲ್, ರೇಖಾ, ರಂಜಿನಿ ಮತ್ತಿತರರು ಉಪಸ್ಥಿತರಿದ್ದರು.




