ಸಾರ್ವಜನಿಕ ಸತ್ಯನಾರಾಯಣ ಪೂಜೆ
ಸುದ್ದಿ9 ಕೈಕಂಬ
ಪೊಳಲಿ ರಾಜಶ್ರೀ ಯುವಕ ಮಂಡಲದ ವತಿಯಿಂದ 13ನೇ ವರ್ಷದ ಸಾರ್ವಜನಿಕ ಸತ್ಯ ನಾರಾಯಣ ಪೂಜೆಯು ವೇದಮೂತರ್ಿ ಕೋಡಿಮಜಲು ಅನಂತ ಪದ್ಮಾನಾಭ ಉಪಾಧ್ಯಾಯ ಅವರ ನೇತ್ರತ್ವದಲ್ಲಿ ಭಾನುವಾರ ಜರಗಿತು. ಪೂಜೆ ನೆರವೇರಿಸಿ ಮಾತನಾಡಿದ ಅವರು ಆದ್ಯಾತ್ಮಿಕತೆಯೊಂದಿಗೆ ರಾಜಕೀಯವನ್ನು ಸೇರಿಸುವುದು ಸರಿಯಲ್ಲ ಆದ್ಯಾತ್ಮಿಕಕ್ಕು ರಾಜಕೀಯಕ್ಕು ಯಾವುದೇ ರೀತಿಯಲ್ಲು ತಾಲೆಯಾಗುವುದಿಲ್ಲ ಆದ್ಯಾತ್ಮವೆಂದರೆ ಅದು ಒಂದು ಸಾಗರವಿದ್ದಂತೆ ಅದು ಯಾವುದಕ್ಕೂ ಸಾಟಿಯಾಗದು ಎಂದು ಹೇಳಿದರು. ಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು

