ಕೈಕಂಬ: ಪೊಳಲಿ ರಾಮಕೃಷ್ಣ ಆಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸೆ.4ರಂದು ಶುಕ್ರವಾರ ಬೆಳಗ್ಗೆ ಏಕಾಹ ಭಜನೆಗೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಪರಮ ಪೂಜ್ಯ ಸ್ವಾಮಿ ಬೋಧಸ್ವರೂಪಾನಂದಾಜೀ ಮಹರಾಜ್ ಚಾಲನೆ ನೀಡಿದರು.
ಪೊಳಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂಡಳಿಯವರಿಂದ ಭಜನೆಯು ಪ್ರಾರಂಭವಾಗಿ ರಾಮಕೃಷ್ಣ ಆಶ್ರಮದಿಂದ ಭಜನೆಯೊಂದಿಗೆ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಒಂದು ಸುತ್ತು ಪ್ರದಕ್ಷಿನೆ ಹಾಕಿ ನಂತರ ಆಶ್ರಮದಲ್ಲಿ ನಿರಂತರ 24 ಗಂಟೆಗಳವಿವಿಧ ಭಜನಾ ಮಂಡಳಿಗಳಿಂದ ಭಜನೆಯು ನಡೆಯಲಿದೆ. ಈ ಸಂಧರ್ಭದಲ್ಲಿ ಸ್ವಾಮಿ ವಿವೇಕಚೈತನ್ಯಾನಂದ ರಾಮಕೃಷ್ಣ ಆಶ್ರಮದ ಹಲವಾರು ಭಕ್ತರು ಭಜನೆಯಲ್ಲಿ ಭಾಗವಹಿಸಿದ್ದರು.







