ಬಿ.ಸಿ.ರೋಡಿನಿಂದ ಪೊಳಲಿ ಶ್ರೀ ರಾಜಾರಾಜೇಶ್ವರಿ ದೇವಿಯ ದಿವ್ಯ ಸನ್ನಿಧನಕ್ಕೆ ಹಾದು ಹೋಗುವ ಸ್ವಾಮಿ ವಿವೇಕಾನಂದ ರಸ್ತೆಯ ಹೃದಯು ಭಾಗದಲ್ಲಿ ಸಿಗುವ ಪುಟ್ಟ ಊರೆ ತೆಂಕಬೆಳ್ಳೂರಿನ ಧನುಪೂಜೆಯ ಕಮ್ಮಾಜೆ. ಇಲ್ಲಿ ನೀರಿನ ಟಾಂಕಿಯ ಬಳಿ ಮಾಜಿ ಸೈನಿಕ ದಿ. ಪದ್ಮನಾಭ ಪೊಯ್ಯ ಕ್ರೀಡಾಂಗಣದಲ್ಲಿ ಸುಮಾರು 13 ವರ್ಷದಿಂದ ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ಎಂಬ ಯುವಕರ ತಂಡ ಶ್ರೀ ಕೃಷ್ಣನ ಹೆಸರಿನಲ್ಲಿ ನಡೆಸಿಕೊಂಡು ಬರುವ ಮೋಸರು ಕೂಡಿಕೆ ಉತ್ಸವವು ಅತೀ ವಿಜೃಂಭನೆಯಿಂದ ಕೂಡಿರುತ್ತದೆ.
ಈ ವರ್ಷ 14ನೇ ವರ್ಷಕ್ಕೆ ಕಾಲಿಡುತ್ತಿದ್ದು. ತಾ. 06-09-2015ನೇ ಅದಿತ್ಯವಾರ ಮೋಸರು ಕುಡಿಕೆ ಉತ್ಸವವು ಜರಗಲಿರುವುದು.
ವಿಶೇಷ ಆಕರ್ಷಣೆ ಯುವಕರಿಗೆ ಆಹ್ವಾನಿತ ತಂಡಗಳ ಮುಕ್ತ ಕಬ್ಬಡ್ಡಿ ಪಂದ್ಯಾಟ ನಡೆಯಲಿದೆ,
ಆಸಕ್ತ ತಂಡಗಳು ಮುಂಚಿನ ದಿನ 9964277136 ಪೋನ್ ಮೂಲಕ ಹೆಸರು ನೋದಾಯಿಸಬೇಕಾಗಿ ವಿಂನತಿಸಲಾಗಿದೆ.
ಹಾಗೇ ಸಂಜೆ 6.00 ರಿಂದ ಶ್ರೀ ಕೃಷ್ಣ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ.


