ಮೂಡುಬಿದಿರೆ:ಮಾಂಟ್ರಾಡಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಕಪ್ಪು ಕಲ್ಲು ಗಣಿಕಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಮಂಗಳೂರಿನ ಗಣಿ ಮತ್ತು ಭೂವಿಜ್ಷಾನ ಇಲಾಖೆಯ ಅಧಿಕಾರಿಗಳು ಗಣಿಗಾರಿಕೆ ನಡೆಸಿದ ವ್ಯಕ್ತಿಗೆ ರೂ ಒಂದು ಲಕ್ಷ ದಂಡ ವಿಧಿಸಿದ್ದಾರೆ.


ದಾಳಿ ವೇಳೆ ಸ್ಥಳದಲ್ಲಿದ್ದ ಲಾರಿಯ ಕೆಲವು ಪಾರ್ಟ್ಸ್ಗ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಲಾರಿ ಮಾಲಕರಿಗೆ ರೂ 8 ಸಾವಿರ ದಂಡ ವಿಧಿಸಿದ್ದಾರೆ. ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕುಂದಾಪುರ ಉಪ ಅರಣ್ಯ ವಿಭಾಗಕ್ಕು ದೂರು ನೀಡಿರುವುದಾಗಿ ತಿಳಿದುಬಂದಿದೆ.
ಅಶೋಕ್ ಕುಮಾರ್ ಅವರು ಮಾಂಟ್ರಾಡಿಯ ಮೀಸಲು ಅರಣ್ಯ ಪ್ರದೆಶದಲ್ಲಿ ಕಪ್ಪು ಕಲ್ಲು ಗಣಿಗಾರಿಕೆ ನಡೆಸಿದ್ದ ಆರೋಪದಲ್ಲಿ 2014ರಲ್ಲಿ ಮಂಗಳೂರಿನ ಗಣಿ ಇಲಾಖೆ ಅಧಿಕಾರಿಗಳು ರೂ 1 ಲಕ್ಷ ದಂಡವಿಧಿಸಿದ್ದರು. ಮತ್ತೆ ಅವರು ಅದೇ ಪ್ರದೆಶದಲ್ಲಿ ಗಣಿಗಾರಿಕೆ ಮುಂದುವರಿಸಿದರೆನ್ನಲಾಗಿದೆ.

