ಸಚಿವ ರೈ. ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ
ಬಂಟ್ವಾಳ : ಬಡಗಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯ ವತಿಯಿಂದ ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ರವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಬಡಗಬೆಳ್ಳೂರು ಗ್ರಾ.ಪಂಚಾಯತ್ ನಲ್ಲಿ ಜರಗಿತು.
ಪಂ.ಅಧ್ಯಕ್ಷೆ ವೇದಾವತಿ , ತಾ.ಪಂ.ಸಹಾಯಕ ನಿರ್ದೇಶಕಿ ದಯಾವತಿ , ಉಪತಹಶೀಲ್ದಾರ್ ರೋಹಿನಾಥ್ , ಇಂಜಿನಿಯರ್ ಕೃಷ್ಣ , ಕಂದಾಯ ಅಧಿಕಾರಿ ನಾರಾಯಣ ಪೂಜಾರಿ , ಪಂ.ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ , ಸದಸ್ಯರಾದ ಯೋಗೀಶ್ , ಜಾನ್ ಕುಟಿನ್ಹ , ಪ್ರಮುಖರಾದ ಅಬ್ಬಾಸ್ ಆಲಿ , ವಸಂತ್ ಅಂಚನ್ , ಕಿಶೋರ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು .


