ಮೂಡುಬಿದರೆ: ಬಾಗೇವಾಡಿ ಪಿ.ಬಿ. ಯವರು ಡಾ.ಎನ್.ಲಕ್ಷ್ಮೀ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ `ಎ ಸ್ಟಡಿ ಆನ್ ದಿ ಡೆವೆಲಪ್ಮೆಂಟ್ ಆಫ್ ಟೀಚರ್ಸ್ ಕಾಂಪಿಟೆನ್ಸಿ ಅಮಾಂಗ್ ಸ್ಟುಡೆಂಟ್ ಟೀಚರ್ಸ್ ಎಟ್ ಸೆಕೆಂಡರಿ ಲೆವೆಲ್ ಯುಸಿಂಗ್ ಕನ್ಸ್ಟ್ರಕ್ಟಿವ್ ಅಪ್ರೋಚ್’ ಎಂಬ ಪ್ರೌಢ ಪ್ರಬಂಧಕ್ಕೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯವು ಪಿಹೆಚ್ಡಿ ಪದವಿ ನೀಡಿ ಗೌರವಿಸಿದೆ.
ಬಾಗೇವಾಡಿ ಪ್ರಸ್ತುತ ಮೂಡುಬಿದರೆ ದಿಗಂಬರ ಜೈನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದಾರೆ. ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯ (ಬಿ.ಎಡ್) ಹಾಗೂ ಸೇಂಟ್ ಆನ್ಸ್ ಶಿಕ್ಷಣ ಮಹಾವಿದ್ಯಾಲಯದ (ಎಂ.ಎಡ್) ಹಳೆಯ ವಿದ್ಯಾರ್ಥಿಯಾಗಿದ್ದಾರೆ.

