ಕೈಕಂಬ: ಗುರುಪುರ ಗೋಳಿದಡಿ ಗುತ್ತಿನ ಗುತ್ತುದ ವರ್ಷದ ಪರ್ಬೋ ಕಾರ್ಯಕ್ರಮ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ಜ.19 ಸೋಮವಾರ ನಡೆಯಿತು. ಸಾಂಸ್ಕ್ರತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಗಡಿಕಾರರು ದೋಣಿಂಜೆಗುತ್ತು ಶ್ರೀ ಪ್ರಮೋದ ಕುಮಾರ್ ರೈ ದೀಪ ಪ್ರಜ್ವಲಿಸಿದರು ,ಶ್ರೀ ಗುರು ಸಾನಿಧ್ಯ ವೇದ ವಿಜ್ಞಾನ ಮಂದಿರ ಚಿಕ್ಕಮಂಗಳೂರು ಬ್ರಹ್ಮಶ್ರೀ ಕೆ.ಎಸ್. ನಿತ್ಯಾನಂದರು ಆಗಮಿಸಿದ್ದರು.


ಗುರುಪುರ ಶ್ರೀ ಮುಂಡಿತ್ತಾಯ ದೈವಸ್ಥಾನದ ತಂತ್ರಿಗಳು ಶ್ರೀ.ಜಿ.ಟಿ. ಅಣ್ಣುಭಟ್, ಹಂಪಿ ಕನ್ನಡ ವಿಶ್ವವಿದ್ಯಾಲಯ ಮುಖ್ಯಗ್ರಂಥಪಾಲಕರು ಡಾ.ಹೆಚ್ ನಾಗವೇಣಿ ದಿಕ್ಸೂಚಿ ಮಾತುಗಲನ್ನಾಡಿದರು, ಮುಖ್ಯ ಅಥಿತಿಗಳಾಗಿ ಶ್ರೀ ಕ್ಷೇತ್ರ ತಿಮರೋಡಿ ಅಭಿವೃದ್ಧಿ ಸಮಿತಿ ಕುಂಜರ್ಪ ಅಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ, ಜನರಲ್ ಮ್ಯಾನೇಜರ್, ಮೆ/ ಕಾರ್ಡಿಯಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಎಲ್.ಎಲ್. ಪಿ ದಿವಾಕರ ಕೆ , ಕಬೆತ್ತಿಗುತ್ತು ಪೆರಾರ ಕಿಶೋರ್ ಕುಮಾರ್ ಕರ್ಕೇರ ಉಪಸ್ಥಿತರಿರುವರು.
