ಬೆಂಗಳೂರು : ಬೆಂಗಳೂರು ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಮಿ ಸಂಘಟನೆ ಹೆಸರು ಪ್ರಸ್ತಾಪಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. +
ಈ ಬಗ್ಗೆ ಹೇಳಿಕೆ ಬೆಂಗಳೂರಿನಲ್ಲಿ ನೀಡಿರುವ ಮುಸ್ಲಿಂ ಫೆಡರೇಷನ್ ಅಧ್ಯಕ್ಷ ಷರೀಫ್ ಕೊಟ್ಟಾಪುರ, ಜನರಲ್ಲಿ ಸಿಮಿ ಅಂದರೆ ಮುಸ್ಲಿಂ ಎಂಬ ಭಾವನೆ ಇದೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ನಮ್ಮ ತಕರಾರಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯಬೇಕು, ಆದರೆ ಸಿಮಿ ಸಂಘಟನೆಗೂ ಮುಸ್ಲಿಮರಿಗೂ ಸಂಬಂಧವಿಲ್ಲ. ಹಾಗಾಗಿ ತನಿಖಾ ಹಂತದಲ್ಲಿ ಸಿಮಿ ಸಂಘಟನೆ ಹೆಸರು ಹೇಳೋದು ಸರಿಯಲ್ಲ ಎಂದಿದ್ದಾರೆ.
ಈ ಮೊದಲು ಕೇಂದ್ರ ಗೃಹ ಸಹಾಯಕ ಸಚಿವ ಕಿರೆನ್ ರಿಜು, ಬೆಂಗಳೂರು ಸ್ಫೋಟದಲ್ಲಿ ಸಿಮಿ ಉಗ್ರರ ಕೈವಾಡ ಎಂದಿದ್ದರು. ಆದರೆ ಇದಕ್ಕೆ ಫೆಡರೇಷನ್ ಆಫ್ ಮುಸ್ಲಿಂ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಸಿಮಿ ಹೆಸರು ಪ್ರಸ್ತಾಪಿಸದಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತೇವೆ ಎಂದು ಷರೀಫ್ ಹೇಳಿದ್ದಾರೆ.

