ಸುದ್ದಿ9 ಬಂಟ್ವಾಳ: ನವೀಕರಣಗೊಳ್ಳಲಿರುವ ಬಿ.ಸಿ.ರೋಡಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಸುದರ್ಶನ ಹೋಮ ಹವನವು ಚಂಡಿಕಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್ ಭಟ್ ನೇತೃತ್ವದಲ್ಲಿ ನಡೆಯಿತು. ಭಜನಾ ಮಂದಿರದ ಅಧ್ಯಕ್ಷ ಸತೀಶ್ ಭಂಡಾರಿ ಕೊಳತ್ತಬೆಟ್ಟು, ಕಾರ್ಯದರ್ಶಿ ಚರಣ್ ಜುಮಾದಿಗುಡ್ಡೆ, ಸದಸ್ಯರಾದ ಪ್ರಮೋದ್ ಕುಂಆರ್, ಸತೀಶ್, ವಿಶ್ವನಾಥ, ಇಂದ್ರೇಶ್ ಮತ್ತು ವ್ಯಾಯಾಮ ಶಾಲೆಯ ಪದಾಧಿಖಾರಿಗಳು ಉಪಸ್ಥಿತರಿದ್ದರು.

