ಬಂಟ್ವಾಳ: ಜೈವಿಕ ಕೃಷಿ ಪದ್ಧತಿಯನ್ನು ಮರೆತ ಪರಿಣಾಮ ಭೂ ಸಂಪತ್ತು ನಾಶವಾಗುತ್ತಿದೆ. ಭೂಮಿಗೆ ಪುನಃ ಶಕ್ತಿ ಬರಬೇಕಾದರೆ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ, ಮೂಲ ಕೃಷಿ ಪದ್ಧತಿಗಳತ್ತ ಮರಳಬೇಕಾಗಿದೆ. ಸಾವಯವ ಕೃಷಿಕರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ವಾರದ ಸಾವಯವ ಸಂತೆ ಮಹತ್ವದ ವೇದಿಕೆಯಾಗಲಿದೆ ಎಂದು ರಾಧಾ ಸುರಭಿ ಗೋ ಮಂದಿರದ ಭಕ್ತಿಭೂಷಣ್ ಪ್ರಭುಜೀ ಹೇಳಿದರು.
ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಹಾಗೂ ಸಮೃದ್ಧಿ ದೀನಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇದರ ಆಶ್ರಯದಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ‘ವಾರದ ಸಂತೆ’ಯನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಗತಿಪರ ಕೃಷಿಕ ಮುಂಡಾಜೆಗುತ್ತು ಜ್ಯೋತಿಂದ್ರ ಶೆಟ್ಟಿ,ಲಕ್ಷ್ಮಿಕಾಂತ್ ನಾಯಕ್ ಕೊಡ್ಮಾಣ್, ಶಿಕ್ಷಣ ತಜ್ಞ ದೇವದಾಸ್ ಕೊಡ್ಮಾಣ್, ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ಪೂರ್ಣಿಮಾ ತಾರಾನಾಥ ಕೊಟ್ಟಾರಿ, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ ಎನ್, ಮಾಜಿ ಅಧ್ಯಕ್ಷ ಬಿ ಸುರೇಶ ಭಂಡಾರಿ ಅರ್ಬಿ, ಗೌರವಾಧ್ಯಕ್ಷ ಪಿ ಸುಬ್ರಮಣ್ಯ ರಾವ್, ಮೇರಮಜಲು ಗ್ರಾ ಪಂ ನಿಕಟಪೂರ್ವ ಅಧ್ಯಕ್ಷ ಸತೀಶ ನಾಯ್ಗ ಕೊಡ್ಮಾಣ್ ಕೊಡಿ, ಗ್ರಾಮ ವಿಕಾಸ ಪ್ರತಿಷ್ಠಾನದ ಸಂಯೋಜಕ ಸಂತೋಷ್ ಕುಮಾರ್,ಬಾಲ ಗೋಕುಲ ವಿಭಾಗ ಟೋಳಿ ಸದಸ್ಯೆ ಲತಾ ತುಂಬೆ, ಭಾಸ್ಕರ್ ಕುಲಾಲ್ ನೆತ್ತರಕೆರೆ,ರಘುನಾಥ ಹೊಳ್ಳರಬೈಲು,ಗೋಪಾಲ್ ಗೋವಿಂದೋಟ,ಕಿಶೋರ್ ಕುಮಾರ್ ನಿಸರ್ಗ ಉಪಸ್ಥಿತರಿದ್ದರು.

ಮಂಗಳೂರು ಜಿಲ್ಲಾ ಗ್ರಾಮಾಂತರ ಗ್ರಾಮ ವಿಕಾಸ ಸಂಯೋಜಕ ದಾಮೋದರ ನೆತ್ತರಕೆರೆ ಪ್ರಸ್ತಾವಿಸಿ, ಸ್ವಾಗತಿಸಿದರು, ಸಮೃದ್ಧಿ ದೀನಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀಧರ ಹೆಚ್  ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *