ಕೈಕಂಬ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಕೇಂದ್ರ ಕಛೇರಿ ಬೆಳ್ತಂಗಡಿ ಇದರ 28ನೇ ಶಾಖೆಯು “ಗುರುಪುರ-ಕೈಕಂಬ” ಅನಂತ ಮಹಲ್ ಕಾಂಪ್ಲೆಕ್ಸ್ ನಲ್ಲಿ ಜೂ.19ರಂದು ಶುಕ್ರವಾರ ಶುಭಾರಂಭಗೊಳ್ಳಲಿದೆ. ಶ್ರೀ ಗುರುದೇವ ವಿವಿಧೋದ್ದೇಶ ಸ. ಸಂ. (ನಿ.) ಬೆಳ್ತಂಗಡಿ ಅಧ್ಯಕ್ಷರು ಶ್ರೀ ಭಗೀರಥ ಜಿ. ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಅಧ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಅಧ್ಯಕ್ಷರು ಬೈಲು ಏತಮೊಗರು ದೊಡ್ಡಮನೆ ಹರೀಶ್ ಶೆಟ್ಟಿ, ಉದ್ಘಾಟಿಸಲಿದ್ದಾರೆ. ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ಭುವನೇಶ್ ಪಚ್ಚಿನಡ್ಕ, ಎಸ್ಆರ್ ಆರ್ ಮಸಾಲ ಇಂಡಸ್ಟ್ರೀಸ್ ಮಂಗಳೂರು ಮ್ಯಾನೇಜಿಂಗ್ ಡೈರೆಕ್ಟರ್ ಶೈಲೇಂದ್ರ ವೈ ಸುವರ್ಣ, ಕೈಕಂಬ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರು ವಿನೋದ್ ಕುಮಾರ್ ಮಾಡ, ನಿಕಟ ಪೂರ್ವ ಅಧ್ಯಕ್ಷರು, ಗ್ರಾಮ ಪಂಚಾಯತ್ ಗಂಜಿಮಠ ಶ್ರೀಮತಿ ಮಾಲತಿ ಎಂ, ಉದ್ಯಮಿಗಳಾದ ಎಂ ಹರಿರಾವ್ ಕೈಕಂಬ , ಗೋಪಾಲಕೃಷ್ಣ ಕೆ. , ಸತೀಶ್ಚಂದ್ರ ಇರುವೈಲು ಪಾಣಿಲ, ಕೈಕಂಬ ಶ್ರೀ ರಾಜೇಶ್ ಪೈ, ಜಿ. ಸುನಿಲ್ ಗಂಜಿಮಠ, ಬೂಬ ಪೂಜಾರಿ, ಮಳಲಿ , ರೋಮನ್ಸ್ ಬೇಸಿಲ್ ಲೋಬೊ, ಎಂ ಎಫ್ ಮುಸ್ತಾಫಾ, , ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷರಾದ ಬಾಲಕೃಷ್ಣ ಕೋಟ್ಯಾನ್ ಗುರುಪುರ, ದಿನೇಶ್ ಕಂದಾವರ, ಕೇ ಶವ ಪೂಜಾರಿ ಮಳಲಿ, ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್ ತಿಳಿಸಿದ್ದಾರೆ.
