ಬಂಟ್ವಾಳ :ಚಿಣ್ಣರ ಲೋಕ ಸೇವಾ ಬಂಧು (ರಿ )ಚಿಣ್ಣರ ಲೋಕ ಮೋಕೆದ ಕಲಾವಿದೆರ್ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ನಡೆಯುವ “ಶೈಕ್ಷಣಿಕ ಸಂಭ್ರಮ-2025 “ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಖ್ಯಾತ ಜ್ಯೋತಿಷ್ಯರಾದ ಅನಿಲ್ ಪಂಡಿತ್ ಬ್ರಹ್ಮರಕೊಟ್ಲು ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭಹಾರೈಸಿದರು.ಬಂಟ್ವಾಳ ತುಳುಬಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಅವರ ಅಧ್ಯಕ್ಷತೆ ವಹಿಸಿದ್ದರು.
ಚಿಣ್ಣರ ಲೋಕ ಸೇವಾ ಬಂಧು ಆಡಳಿತ ಟ್ರಸ್ಟಿ ತಾರಾನಾಥ ಕೊಟ್ಟಾರಿ,ಚಿಣ್ಣರ ಲೋಕ ಸೇವಾ ಬಂಧು ಅಧ್ಯಕ್ಷರಾದ
ಮೋಹದಾಸ್ ಕೊಟ್ಟಾರಿ ಮುನ್ನೂರು ,ಕೋಶಾಧಿಕಾರಿ ನವೀನ್ ಕುಮಾರ್ ,ಗೌರವ ಸಲಹೆಗಾರರಾದ ಸರಪಾಡಿ ಅಶೋಕ ಶೆಟ್ಟಿ , ದತ್ತು ಶಾಲೆಯ ಸಂಚಾಲಕರಾದ ರಾಮಕೃಷ್ಣ ರಾವ್ ,ಸಂಸ್ಥೆಯ ನಿರ್ದೇಶಕರಾದ
ಶೋಭ ಶೆಟ್ಟಿ,ಸದಸ್ಯರಾದ ಫೌಝಿಯಾ,ಡಾ. ರೂಪ ಲತಾ, ಮಲಿಕ್ ಕೊಳಕೆ,ಆಶಾ ಮಂಗಳೂರು, ಸಿಂಧೂ ರಾವ್ ಮಂಗಳೂರು,ವಿದ್ಯಾಶ್ರೀ ಕುಲಾಲ್ ಬಿ.ಸಿ.ರೋಡ್ ಉಪಸ್ಥಿತರಿದ್ದರು.
