ಸುರತ್ಕಲ್: ಜೋಕಟ್ಟೆಯ ಜನವಸತಿ ಪ್ರದೇಶದ ಮಧ್ಯೆ ಸ್ಥಾಪನೆಯಾಗಿರುವ ಕಲ್ಲಿದ್ದಲು ಮತ್ತು ಸಲ್ಫರ್ ಘಟಕಗಳಿಂದಾಗಿ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗಿದೆ. ಸದ್ರಿ ಕಂಪೆನಿಗಳನ್ನು ಈ ಕೂಡಲೇ ಮುಚ್ಚುಗಡೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಮುಂಜಾನೆ ನೂರಾರು ಸಂಖ್ಯೆಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

jokatte 1

jokatte 2

ಸುಮಾರು 500ರಷ್ಟು ಸಂಖ್ಯೆಯಲ್ಲಿದ್ದ ಗ್ರಾಮಸ್ಥರು ಮೆರವಣಿಗೆ ನಡೆಸಿ ಸ್ಥಳದಲ್ಲಿ ಧರಣಿ ಕೂತು ಕಂಪೆನಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಎಂಆರ್ಪಿಎಲ್ ಹಾಗೂ ಸೆಝ್ ಕಂಪೆನಿಗಳು ಊರಿಗೆ ಬಂದ ನಂತರ ಜನರ ಆರೋಗ್ಯ ಹದಗೆಟ್ಟಿದ್ದು, ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ನಾಗರಿಕರು ಈ ಸಂದರ್ಭ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಕಲ್ಲಿದ್ದಲು, ಸಲ್ಫರ್ ಘಟಕಗಳಿಂದಾಗಿ ಧೂಳಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಸ್ವಚ್ಛ ಗಾಳಿಯನ್ನು ಉಸಿರಾಡುವಂತಿಲ್ಲ. ಮಕ್ಕಳ ಆರೋಗ್ಯದ ಮೇಲೂ ಈ ಕಂಪೆನಿಗಳು ದುಷ್ಪರಿಣಾಮ ಬೀರುತ್ತಿವೆ ಎಂದು ಸಾರ್ವಜನಿಕರು ಆಕ್ರೋಶಿತರಾಗಿ ಹೇಳಿದರು. ಪಣಂಬೂರು, ಸುರತ್ಕಲ್ ಠಾಣಾ ಪೊಲೀಸರು ಬಂದೋಬಸ್ತ್ ವಹಿಸಿದ್ದರು. ನಂತರ ಸಂಬಂಧಪಟ್ಟ ಕಂಪೆನಿ ಅಧಿಕಾರಿಗಳಿಗೆ ಮನವಿ ಅಪರ್ಿಸಲಾಯಿತು.

By suddi9

Leave a Reply

Your email address will not be published. Required fields are marked *