ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಸರಳತೆ ಮತ್ತು ಸೌಮ್ಯ ಸ್ವಭಾವದಿಂದ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದ ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಶನಿವಾರ ನಿವೃತ್ತಿಗೊಂಡರು. ಈ ಹಿಂದೆ ಬಂಟ್ವಾಳದಲ್ಲಿ ಕಂದಾಯ ನಿರೀಕ್ಷಕರಾಗಿ, ಉಪ ತಹಶೀಲ್ದಾರ್ ಮತ್ತಿತರ ಹುದ್ದೆಗಳನ್ನು ನಿರ್ವಹಿಸಿ ಅನುಭವದಿಂದಲೇ ಮುಂಬಡ್ತಿ ಹೊಂದಿದ್ದ ಇವರು ಹಿಂದಿನ ತಹಶೀಲ್ದಾರ್ ಆನಂದ ನಾಯಕ್ ನಿವೃತ್ತಿ ಬಳಿಕ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ತಾಲ್ಲೂಕು ಕಛೇರಿಗೆ ಬರುವ ಪ್ರತಿಯೊಬ್ಬ ನಾಗರಿಕರಿಗೂ ತಹಶೀಲ್ದಾರ್ ಕಚೇರಿ ಮುಕ್ತವಾಗಿಟ್ಟು, ಎಲ್ಲರೊಂದಿಗೆ ಸೌಮ್ಯದಿಂದಲೇ ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದರು.
ಇಲ್ಲಿನ ಭೂಮಿ ಶಾಖೆ ಬಳಿ ಪಹಣಿಪತ್ರಕ್ಕಾಗಿ ನಾಗರಿಕರು ಮಳೆ ಮತ್ತು ಬಿಸಿಲಿಗೆ ಅಂಗಳದಲ್ಲಿ ನಿಲ್ಲುತ್ತಿರುವ ಬವಣೆ ನೀಗಿಸಲು ಹೊಸ ಪಡಸಾಲೆ ಆರಂಭಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬಿ.ಸಿ.ರೋಡ್ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ವತ: ಅಧ್ಯಕ್ಷರು ಸಹಿತ ಉಪಾಧ್ಯಕ್ಷ ಸತೀಶ ಕುಂಪಲ ಮತ್ತು ಜಿ.ಪಂ. ಉಪ ಕಾರ್ಯದಶರ್ಿ ಎನ್.ಆರ್. ಉಮೇಶ್ ಇವರು ಕೂಡಾ ತಹಶೀಲ್ದಾರ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಶನಿವಾರ ಮಧ್ಯಾಹ್ನ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
