ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿ ನೇಮೋತ್ಸವದ ಪ್ರಯುಕ್ತ ಫೆ.೧೯ರಂದು ಶನಿವಾರ ರಾತ್ರಿ ೧೦ ಗಂಟೆಯಿಂದ ಶ್ರೀ ಕೋರ್ದಬ್ಬು ತನ್ನಿಮಾನಿಗ ದೈವಗಳ ವಾರ್ಷಿಕ ನೇಮೋತ್ಸವ ಹಾಗೂ ಫೆ.೨೦ರಂದು ಭಾನುವಾರ ರಾತ್ರಿ ೮ ಗಂಟೆಯಿಂದ ಗುಳಿಗ ಪಂಜುರ್ಲಿ ಮತ್ತು ರಾಹು ದೈವಗಳ ನೇಮೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸುಕೇಶ್ ಚೌಟ ಬಡಕಬೈಲು, ಚಂದ್ರಶೇಖರ ಶೆಟ್ಟಿ ಬಡಕಬೈಲು, ಕಾರ್ಯದರ್ಶಿ ಶೇಖರ ಬಂಗೇರ ಗಾಣೆಮಾರ್, ಪ್ರಧಾನ ಕಾರ್ಯದರ್ಶಿ ದೇವದಾಸ್ ಅಯರೆಮಾರ್, ಶ್ರೀಕರ ಶೆಟ್ಟಿ ಬೊಳಿಯಾರು, ಜೀವನ್ ದಾಸ್ ಬಡಕಬೈಲ್, ಚರಣ್ ಕೃಷ್ಣನಗರ, ನಾರಾಯಣ ಪೂಜಾರಿ ಆಯರೆಮಾರ್, ವಾಮನ ಪೂಜಾರಿ ಸೂರ್ಲ ಮಣಿಕಂಠಪುರ, ಶಶಿಧರ ಮಂಗಾಜೆ ಬಡಕಬೈಲು, , ಜನಾರ್ದನ ಶೆಟ್ಟಿ ಕನ್ಯಾಬೆಟ್ಟು , ಸೋಮಶೇಖರ ಪೊಳಲಿ, ಕಿರಣ್ ಮಿಯಾಳ, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
